ಔರಾದ್: ತಾಲ್ಲೂಕಿನ ಗಡಿ ಭಾಗದಲ್ಲಿ ಭಾನುವಾರ ಎರಡು ಕಡೆ ದಾಳಿ ಮಾಡಿದ ಪೊಲೀಸರು ₹ 20.5 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೋರಳ್ಳಿ ಕ್ರಾಸ್ ಬಳಿ ಕಾರ್ನಲ್ಲಿ ₹17 ಲಕ್ಷ ಮೌಲ್ಯದ 170 ಕೆಜಿ ಗಾಂಜಾ ಪತ್ತೆಯಾದ ಪ್ರಕರಣ ಸಂಬಂಧ
ಆರೋಪಿಗಳಾದ ಅನಿಲ ಚವಾಣ್ ಮತ್ತು ರಾಜು ರಾಠೋಡ್ ಅವರನ್ನು ಬಂಧಿಸಲಾಗಿದೆ. ಚಿಕಲಿ ಕ್ರಾಸ್ ಬಳಿ ಆಟೊರಿಕ್ಷಾದಲ್ಲಿ ₹3.60 ಲಕ್ಷ ಮೌಲ್ಯದ 36 ಕೆ.ಜಿ ಗಾಂಜಾ ಪತ್ತೆಯಾದ ಪ್ರಕರಣ ದಲ್ಲಿ ದೇವಿದಾಸ ರಾಠೋಡ್, ಸಂತೋಷ ರಾಠೋಡ್ ಮತ್ತು ದೇವಿದಾಸ ರಾಮುಲು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ದೇವರಾಜ ನೇತೃತ್ವದಲ್ಲಿ ಸಿಪಿಐ ರವೀಂದ್ರನಾಥ, ಪಿಎಸ್ಐ ಸಿದ್ಧಲಿಂಗ ಹಾಗೂ ಔರಾದ್, ಸಂತಪುರ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.