ಹುಲಸೂರ: ಕೋವಿರ್–19 ಲಾಕ್ಡೌನ್ ಕಾರಣ ತೋಟಗಾರಿಕೆ ಬೆಳೆಗಾರರಿಗೆ ಅನುಕೊಲವಾಗಲೆಂದು ಸಹಾಯವಾಣಿ ಆರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂತೋಷ ತಾಂಡೂರ ತಿಳಿಸಿದ್ದಾರೆ.
ತೋಟಗಾರಿಕೆ ಉತ್ಪನ್ನಗಳಾದ ಹೂ, ಹಣ್ಣು, ತರಕಾರಿ ಇವುಗಳ ಸಾಗಾಣಿಕೆ ಮತ್ತು ಮಾರಾಟಕ್ಕೆ ತೋಟಗಾರಿಕೆ ರೈತರಿಗೆ ನೆರವಾಗಲು ಬಸವಕಲ್ಯಾಣ ಕ್ಷೇತ್ರದ ಆಯಾ ಹೋಬಳಿ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಜೊತೆಗೆ ರೈತರಿಗೆ ಗ್ರೀನ್ ಪಾಸ್ ನೀಡಲಾಗುತ್ತಿದೆ.
ಬಸವಕಲ್ಯಾಣ 8105451079, ಹುಲಸೂರ 9901592256, ಮಂಠಾಳ 9902929279, ರಾಜೇಶ್ವರ 8105481079, ಮುಡಬಿ 9663742933, ಕೋಹಿನೂರ 9980739132 ಹಾಗೂ ಹೆಚ್ಚಿನ ಮಾಹಿತಿಗೆ 9916874287 ಸಂಪರ್ಕಿ ಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.