ADVERTISEMENT

ಅಕ್ಕಮಹಾದೇವಿ ವಚನಗಳಲ್ಲಿ ಬದುಕಿನ ಮೌಲ್ಯ; ಮಾಲಾಶ್ರೀ ಶಾಮರಾವ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 5:55 IST
Last Updated 18 ಏಪ್ರಿಲ್ 2022, 5:55 IST
ಚಿಟಗುಪ್ಪ ಪುರಸಭೆ ಕಚೇರಿಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು
ಚಿಟಗುಪ್ಪ ಪುರಸಭೆ ಕಚೇರಿಯಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು   

ಚಿಟಗುಪ್ಪ: ನಾಡಿನ ವಚನಕಾರರಲ್ಲಿ ಅಕ್ಕಮಹಾದೇವಿ ಪ್ರಮುಖರಾಗಿದ್ದವರು ಎಂದು ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್‌ ಹೇಳಿದರು.

ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯ ಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಸಂಪತ್ತು, ವೈಭವ, ಭೋಗ ಜೀವನ ತಿರಸ್ಕರಿಸಿ ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು, ಸಾಮಾನ್ಯರಂತೆ ಜನಜೀವನ ನಡೆಸಿದವರು. ಬದುಕಿನ ಮೌಲ್ಯಗಳನ್ನು ವಚನಗಳ ಮೂಲಕ ಪ್ರತಿಪಾದಿಸಿದ್ದರು ಎಂದರು.

ADVERTISEMENT

ಲೆಕ್ಕಿಗ ನರೇಶ್‌ ಘನಾತೆ ಮಾತ ನಾಡಿದರು. ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ, ಸಿಬ್ಬಂದಿ ಚಿದಾನಂದ ಪತ್ರಿ, ಕಿರಿಯ ಆರೋಗ್ಯ ನಿರೀಕ್ಷಕ ರವಿ ಕುಮಾರ್‌, ವೈಶಾಲಿ, ಕವಿತಾ, ಸರೋಜನಿ, ರಾಜಕುಮಾರ್‌, ದಿಲೀಪ್‌, ಬಕ್ಕಪ್ಪ, ರವಿ ಭಯ್ಯ, ನಥಾನಿಯೆಲ್‌, ಸಚಿನ್‌, ಬಕ್ಕಣ್ಣ, ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.