ADVERTISEMENT

ಅಕ್ಕನ ವಚನ­ಗಳ ಸಾರ ಅರಿಯಿರಿ- ಮಲ್ಲಿಕಾರ್ಜುನ ಪಾಟೀಲ ಮುಗನೂರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 5:30 IST
Last Updated 17 ಏಪ್ರಿಲ್ 2022, 5:30 IST
ಖಟಕಚಿಂಚೋಳಿ ಸಮೀಪದ ಮುಗನೂರ ಗ್ರಾಮದಲ್ಲಿ ಶನಿವಾರ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು
ಖಟಕಚಿಂಚೋಳಿ ಸಮೀಪದ ಮುಗನೂರ ಗ್ರಾಮದಲ್ಲಿ ಶನಿವಾರ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು   

ಖಟಕಚಿಂಚೋಳಿ: ಸಮೀಪದ ಮುಗನೂರ ಗ್ರಾಮದಲ್ಲಿ ಶನಿವಾರ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮುಗನೂರ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ‘ಇಂದಿನ ಯುವಕರು ಅಕ್ಕಮಹಾದೇವಿ ವಚನ­ಗಳಲ್ಲಿನ ಸಾರವನ್ನು ಅರ್ಥಮಾಡಿಕೊಳ್ಳಬೇಕು. ಅವರ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಕಲ್ಯಾಣರಾವ್ ಜೀವಣಗಿ, ಸಂತೋಷ ಪಾಟೀಲ, ರಾಮರಾವ್ ಜಿವಣಗಿ, ಸಂತೋಷ ಮಲಗಿ, ವೀರಪ್ಪ ಹಾಲಹಳ್ಳಿ, ಸಂಗಪ್ಪ ಫತ್ತೇಪುರ, ಸುಭಾಷ ನಾಗಶೆಟ್ಟಿ, ರವಿ ನಾಗಶೆಟ್ಟಿ, ಪ್ರಕಾಶ ಡಾಕುಳಗಿ, ಗುರುಸಿದ್ಧ ಜೀವಣಗಿ, ಘಾಳಯ್ಯ ಸ್ವಾಮಿ, ಗುಂಡು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.