
ಬೀದರ್: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಮುಖಂಡ ಗೌತಮ್ ಮಾತನಾಡಿ, ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿ ನಮ್ಮ ದೇಶ ನಡೆಯುತ್ತಿದೆ. ಇಡೀ ಜಗತ್ತಿನಲ್ಲೇ ಅತ್ಯುತ್ತಮವಾದ ಸಂವಿಧಾನ ಕೊಟ್ಟಿದ್ದಾರೆ ಎಂದರು.
ಪ್ರಮುಖರಾದ ಶಕುಂತಲಾ ಬೆಲ್ದಾಳೆ, ಜಿಲ್ಲಾ ಪರಿಶಿಷ್ಟ ಪಂಗಡ ಘಟಕದ ಜಿಲ್ಲಾಧ್ಯಕ್ಷ ರವಿ ನಿಜಾಂಪೂರೆ, ಈಶ್ವರ ಸಿಂಗ್ ಠಾಕೂರ್, ರಾಜಶೇಖರ ನಾಗಮೂರ್ತಿ, ಕಿರಣ ಪಾಟೀಲ್, ಬಾಬುರಾವ್ ಕಾರಬಾರಿ, ರಾಜಕುಮಾರ ನೇಮತಾಬಾದ್, ಶಶಿಧರ ಹೊಸಳ್ಳಿ, ದೀಪಕ್ ಗಾದಗಿ , ಜೈಭೀಮ ಬಂಧು, ಯೋಗೇಶ್ವರಿ ಸೋಮು ಕಾಂಬಳೆ, ಸಂತೋಷ ರೆಡ್ಡಿ, ಸತೀಶ ರಾಠೋಡ್, ರೋಶನ್ ವರ್ಮಾ, ನವೀನ್ ಚಿಟ್ಟಾ, ರಾಜು ಪೋಳು, ಸತೀಶ ದೊಡ್ಡಿ, ನರೇಶ ಗೌಳಿ, ಗಣೇಶ ಭೋಸ್ಲೆ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿವಾಸ ಚೌಧರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.