
ಭಾಲ್ಕಿ: ಪಟ್ಟಣದ ಶ್ರೀಗುರು ಪ್ರಸನ್ನ ಪದವಿ ಕಾಲೇಜಿನ ವಿದ್ಯಾರ್ಥಿನಿ ಮಹೇಶ್ವರಿ ಶಿವಕುಮಾರ ಶೀಲವಂತ ಬಿ.ಎಸ್ಸಿ. ಪದವಿಯಲ್ಲಿ ವಿಶ್ವವಿದ್ಯಾಲಯಕ್ಕೆ ಫಸ್ಟ್ ರ್ಯಾಂಕ್ ಪಡೆದಿದ್ದು, ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 43ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಂದ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ಪ್ರಾಚಾರ್ಯ ವಿಷ್ಣು ಸಿ.ಕೋಟೆ ತಿಳಿಸಿದ್ದಾರೆ.
‘ಬಡ, ಪ್ರತಿಭಾವಂತ ವಿದ್ಯಾರ್ಥಿನಿ ಮಹೇಶ್ವರಿಗೆ ನಮ್ಮ ಕಾಲೇಜಿನಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ವಾಹನ ಸೌಕರ್ಯದ ಜೊತೆಗೆ ಕೌಶಲ್ಯಯುಕ್ತ, ಗುಣಾತ್ಮಕ ಶಿಕ್ಷಣ ನೀಡಿರುವ ಪ್ರಯುಕ್ತ 425 ಕಾಲೇಜುಗಳನ್ನು ಒಳಗೊಂಡ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಿ. ಎಸ್ಸಿಯಲ್ಲಿ ಫಸ್ಟ್ ರ್ಯಾಂಕ್ ಪಡೆದು ತಾಲ್ಲೂಕಿನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಸಂಸ್ಥಾಪಕ ಪ್ರಕಾಶ ಖoಡ್ರೆ, ಅಧ್ಯಕ್ಷೆ ಉಮಾದೇವಿ ಪಿ. ಖoಡ್ರೆ, ಕಾರ್ಯಾಧ್ಯಕ್ಷ ಗುರುಪ್ರಸಾದ ಪಿ.ಖoಡ್ರೆ, ಉಮಾದೇವಿ ಫೌಂಡೇಶನ್ ಅಧ್ಯಕ್ಷ ಪ್ರಸನ್ನ ಪಿ. ಖoಡ್ರೆ, ಆಡಳಿತಾಧಿಕಾರಿ ಬಾಲರಾಜ, ಪ್ರಾಚಾರ್ಯ ವಿಷ್ಣು ಕೋಟೆ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.