ಬಸವಕಲ್ಯಾಣ: ಅಂತರರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಶರಣ ಹರಳಯ್ಯ ಪೀಠದ ಅಡಿಯಲ್ಲಿ ಈಚೆಗೆ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟ ರಚಿಸಿ ಪದಾಧಿಕಾರಿಗಳನ್ನು ನೇಮಿಸಲಾಗಿದೆ.
ಗಂಗಾಂಬಿಕಾ ಅಕ್ಕ (ಗೌರವ ಅಧ್ಯಕ್ಷೆ) ಚನ್ನಪ್ಪ ಪ್ರತಾಪುರೆ (ಅಧ್ಯಕ್ಷ) ಎ.ಡಿ.ಪಾಟೀಲ (ಉಪಾಧ್ಯಕ್ಷ) ಶಂಕರ ಕರಣೆ (ಕಾರ್ಯದರ್ಶಿ) ಈಶ್ವರ ಶೀಲವಂತ (ಸಹ ಕಾರ್ಯದರ್ಶಿ) ಜಗನ್ನಾಥ ಕುಸನೂರೆ (ಕೋಶಾಧ್ಯಕ್ಷ) ಇವರನ್ನು ಹಾಗೂ 15 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಿಸಲಾಯಿತು. ಸಭೆಯಲ್ಲಿ ಶ್ರೀಶೈಲ್ ಹುಡೇದ, ಶಾಮರಾವ್ ಸಿಂಗ, ಮಹಾದೇವಪ್ಪ ಇಜಾರೆ, ಭೀಮಾಶಂಕರ ಮಾಶಾಳಕರ, ಗಣಪತಿ ಕಾಸ್ತೆ, ಚನ್ನಪ್ಪ ಇಜಾರೆ, ಬಾಬುರಾವ, ಲಕ್ಷ್ಮಿಬಾಯಿ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.