ಬೀದರ್: ಜಿಲ್ಲಾ ಕಲಾವಿದರ ಒಕ್ಕೂಟಕ್ಕೆ ದಾನಿಗಳು ನೀಡಿದ ಆಹಾರಧಾನ್ಯದ ಕಿಟ್ಗಳನ್ನು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಅವರು ನಗರದಲ್ಲಿ ಬಡ ಕಲಾವಿದರಿಗೆ ವಿತರಿಸಿದರು.
ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅವರು ಕೊಟ್ಟಿರುವ 200, ಕೀರ್ತಿ ಎನ್.ಜಿ.ಒ. ಅಧ್ಯಕ್ಷ ವಿಜಯಕುಮಾರ ಅಷ್ಟೂರೆ 151, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ 50, ಬಸವ ಕಾಯಕ ದಾಸೋಹ ಫೌಂಡೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಅವರ 14 ಆಹಾರಧಾನ್ಯದ ಕಿಟ್ ಮತ್ತು ವಿವೇಕ ವಾಲಿ ಎಂಟರ್ಪ್ರೈಸೆಸ್ ಮಾಲೀಕ ವಿವೇಕ ವಾಲಿ ಅವರು ನೀಡಿದ 25 ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಜಿಲ್ಲೆಯ ಬಡ ಕಲಾವಿದರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಎಂದು ವಿಜಯಕುಮಾರ ಸೋನಾರೆ ತಿಳಿಸಿದರು.
ಪ್ರಮುಖರಾದ ಎಂ.ಪಿ. ಮುದಾಳೆ, ಸುನೀಲ ಭಾವಿಕಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.