ADVERTISEMENT

ಸ್ಕೌಟ್ಸ್ ಕ್ಯಾಂಪೋರಿ ಪಥ ಸಂಚಲನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 9:52 IST
Last Updated 25 ಫೆಬ್ರುವರಿ 2020, 9:52 IST
ಸ್ಕೌಟ್ಸ್ ಸಂಸ್ಥಾಪಕ ಬಿಡೆನ್ ಪಾವೆಲ್ ಅವರ 163ನೇ ಜನ್ಮದಿನದ ಅಂಗವಾಗಿ ಬೀದರ್‌ನಲ್ಲಿ ಸೋಮವಾರ ನಡೆದ ಸ್ಕೌಟ್ಸ್ ಕ್ಯಾಂಪೋರಿ ಪಥ ಸಂಚಲನದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಕಾಶೀನಾಥ ಪಾಟೀಲ, ಡಾ. ಗೌತಮ ಅರಳಿ ಪಾಲ್ಗೊಂಡಿದ್ದರು
ಸ್ಕೌಟ್ಸ್ ಸಂಸ್ಥಾಪಕ ಬಿಡೆನ್ ಪಾವೆಲ್ ಅವರ 163ನೇ ಜನ್ಮದಿನದ ಅಂಗವಾಗಿ ಬೀದರ್‌ನಲ್ಲಿ ಸೋಮವಾರ ನಡೆದ ಸ್ಕೌಟ್ಸ್ ಕ್ಯಾಂಪೋರಿ ಪಥ ಸಂಚಲನದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಕಾಶೀನಾಥ ಪಾಟೀಲ, ಡಾ. ಗೌತಮ ಅರಳಿ ಪಾಲ್ಗೊಂಡಿದ್ದರು   

ಬೀದರ್: ಸ್ಕೌಟ್ಸ್ ಸಂಸ್ಥಾಪಕ ಬಿಡೆನ್ ಪಾವೆಲ್ ಅವರ 163ನೇ ಜನ್ಮದಿನದ ಪ್ರಯುಕ್ತ ವಿಶ್ವ ಚಿಂತನೆ ಮತ್ತು ವಿಶ್ವ ಭ್ರಾತೃತ್ವ ದಿನಾಚರಣೆ ಅಂಗವಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಗರದಲ್ಲಿ ಸೋಮವಾರ ಸ್ಕೌಟ್ಸ್ ಕ್ಯಾಂಪೋರಿ ಪಥ ಸಂಚಲನ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಚಾಲನೆ ನೀಡಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಗುರಮ್ಮ ಸಿದ್ದಾರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಪಶು ಸಂಗೋಪನೆ ಇಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಗೌತಮ ಅರಳಿ, ಬಸವಕಲ್ಯಾಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸೂರ್ಯಕಾಂತ ಬಿರಾದಾರ, ಸ್ಕೌಟರ್ ರಾಜಕುಮಾರ ಅಲ್ಲೂರೆ, ಉದ್ಯಮಿ ವೀರಕುಮಾರ ಮಜಗೆ, ಕಾಶಿನಾಥ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT