ADVERTISEMENT

ಬೈಕ್‌ ಅಪಘಾತ: ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 16:19 IST
Last Updated 2 ನವೆಂಬರ್ 2022, 16:19 IST

ಬಸವಕಲ್ಯಾಣ: ತಾಲ್ಲೂಕಿನ ಗಿಲಗಿಲಿಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಗ್ರಾಮದ ಶರಣಬಸಪ್ಪ ಪಾಟೀಲ (19) ಮೃತಪಟ್ಟಿದ್ದಾರೆ.

ಬೈಕ್ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಬಂದ್ ಬುಲೇರೋ ವಾಹನ ಡಿಕ್ಕಿ ಆಗಿದ್ದರಿಂದ ಅಪಘಾತವಾಗಿದೆ. ಬೈಕ್ ಮೇಲೆ ಇಬ್ಬರು ಸಮೀಪದ ಬೆಳಮಗಿ ಗ್ರಾಮಕ್ಕೆ ಹಾಲು ಕೊಡುವುದಕ್ಕಾಗಿ ಹೋಗುತ್ತಿದ್ದರು ಎನ್ನಲಾಗಿದ್ದು, ಬೈಕ್‌ನಲ್ಲಿದ್ದ ಹಣಮಂತ ಎಂಬುವರಿಗೆ ಗಾಯವಾದ ಕಾರಣ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಟಗುಪ್ಪ: ತಾಲ್ಲೂಕಿನ ಹಳ್ಳಿಖೇಡ(ಕೆ) ವಾಡಿ ಮೇಲಿನ ರಸ್ತೆ ಬದಿಯ ಸೇತುವೆಗೆ ನಿಯಂತ್ರಣ ತಪ್ಪಿ‌ ಬೈಕ್ ಡಿಕ್ಕಿ ಹೊಡೆದಿದ್ದು ಸವಾರನಿಗೆ ಗಾಯವಾಗಿದ್ದರಿಂದ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ADVERTISEMENT

ಸದರಿ ಗ್ರಾಮದ ಬಸವರಾಜ್ ಸದಲಾಪುರೆ (34) ಮೃತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.