ADVERTISEMENT

ಕಾರ್ಗಿಲ್ ವಿಜಯ ದಿವಸ ಆಚರಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 16:17 IST
Last Updated 26 ಜುಲೈ 2021, 16:17 IST
ಬೀದರ್‌ನ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕಾರ್ಗಿಲ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕರ್ನಲ್ ಶರಣಪ್ಪ ಸಿಕೇನಕುರೆ, ರಘುಕೃಷ್ಣಮೂರ್ತಿ, ನಿತೇಶ್ ಬಿರಾದಾರ, ಅನಿಲರಾವ್ ಬಿರಾದಾರ, ಅಮೃತರಾವ್, ಪೃಥ್ವಿರಾಜ್ ಪಾಲ್ಗೊಂಡಿದ್ದರು
ಬೀದರ್‌ನ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಆಯೋಜಿಸಿದ್ದ ಕಾರ್ಗಿಲ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕರ್ನಲ್ ಶರಣಪ್ಪ ಸಿಕೇನಕುರೆ, ರಘುಕೃಷ್ಣಮೂರ್ತಿ, ನಿತೇಶ್ ಬಿರಾದಾರ, ಅನಿಲರಾವ್ ಬಿರಾದಾರ, ಅಮೃತರಾವ್, ಪೃಥ್ವಿರಾಜ್ ಪಾಲ್ಗೊಂಡಿದ್ದರು   

ಬೀದರ್‌: ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಸೋಮವಾರ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.

ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಲಾಯಿತು. ಅಮರ ಜವಾನ ಜ್ಯೋತಿ ಬೆಳಗಿಸಿ ಪುಷ್ಪನಮನ ಸಲ್ಲಿಸಲಾಯಿತು.

ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರೆ ಮಾತನಾಡಿ, ‘1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದೆ. ದೇಶಕ್ಕಾಗಿ ಅನೇಕ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ADVERTISEMENT

ರಘುಕೃಷ್ಣಮೂರ್ತಿ, ಬೀದರ್‌ ರೋಟರಿ ಕ್ಲಬ್‌ ಅಧ್ಯಕ್ಷ ನಿತೇಶ್ ಬಿರಾದಾರ, ಮಡೆಪ್ಪ, ಅನಿಲರಾವ್ ಬಿರಾದಾರ, ಅಮೃತರಾವ್ ಸಿಕೇನಪುರೆ, ಮುಖ್ಯ ಶಿಕ್ಷಕ ಪೃಥ್ವಿರಾಜ್, ಸೇನಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು, ರೋಟರಿ ಕ್ಲಬ್ ಸದಸ್ಯರು ಹಾಗೂ ಶಿಕ್ಷಕರು ಇದ್ದರು.

ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಬೀದರ್‌: ಭಗತ್‌ಸಿಂಗ್‌ ಯುತ್ ಬ್ರಿಗೇಡ್‌ ವತಿಯಿಂದ ಇಲ್ಲಿಯ ಭಗತ್‌ಸಿಂಗ್‌ ವೃತ್ತದಲ್ಲಿ ಸೋಮವಾರ ಕಾಗ್ರಿಲ್‌ ವಿಜಯೋತ್ಸವ ಆಚರಿಸಲಾಯಿತು.

ಜಸ್ಪ್ರೀತ್‌ಸಿಂಗ್‌ ಮೊಂಟಿ ನೇತೃತ್ವದಲ್ಲಿ ಯುವಕರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ನಂತರ ಜಯ ಘೋಷಣೆಗಳನ್ನು ಕೂಗಿ ಸಿಹಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.