ADVERTISEMENT

ಸಿಡಿಲು ಬಡಿದು ವ್ಯಕ್ತಿ ಸಾವು: ₹5 ಲಕ್ಷ ಪರಿಹಾರ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 4:54 IST
Last Updated 3 ಜೂನ್ 2022, 4:54 IST
ಸಿಡಿಲು ಬಡಿದು ಮೃತಪಟ್ಟ ಔರಾದ್ ತಾಲ್ಲೂಕಿನ ಕಿಶನ ನಾಯಕ ತಾಂಡಾ ಭಿಲ್ಲು ಜಾಧವ ಅವರ ಕುಟುಂಬಸ್ಥರಿಗೆ ಸಚಿವ ಪ್ರಭು ಚವಾಣ್ ಪರಿಹಾರದ ಚೆಕ್ ವಿತರಿಸಿದರು
ಸಿಡಿಲು ಬಡಿದು ಮೃತಪಟ್ಟ ಔರಾದ್ ತಾಲ್ಲೂಕಿನ ಕಿಶನ ನಾಯಕ ತಾಂಡಾ ಭಿಲ್ಲು ಜಾಧವ ಅವರ ಕುಟುಂಬಸ್ಥರಿಗೆ ಸಚಿವ ಪ್ರಭು ಚವಾಣ್ ಪರಿಹಾರದ ಚೆಕ್ ವಿತರಿಸಿದರು   

ಔರಾದ್: ಕಳೆದ ಮಂಗಳವಾರ ಸಿಡಿಲು ಬಡಿದು ಮೃತಪಟ್ಟ ತಾಲ್ಲೂಕಿನ ಕಿಶನ ನಾಯಕ ತಾಂಡಾದ ಭಿಲ್ಲು ಜಾಧವ ಅವರ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರದ ಚೆಕ್ ನೀಡಲಾಯಿತು.

ಸಚಿವ ಪ್ರಭು ಚವಾಣ್ ಬುಧವಾರ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತ ಕುಟುಂಬಕ್ಕೆ ತಕ್ಷಣ ಪರಿಹಾರ ಸಿಗಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದರು. 24 ಗಂಟೆಯಲ್ಲೇ ಪರಿಹಾರ ಕೊಟ್ಟ ಅಧಿಕಾರಿಗಳು ಸಚಿವರ ಮೆಚ್ಚುಗೆಗೆ ಪಾತ್ರರಾದರು.

ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಮುಖಂಡ ರಾಮಶೆಟ್ಟಿ ಪನ್ನಾಳೆ, ಗಿರೀಶ್ ಒಡೆಯರ್, ಗೋವಿಂದರಾಜು ಪಾಟೀಲ್, ಹಣಮಂತ ಸುರನಾರ, ಗೌತಮ ತಾಂದಳೆ, ಹಿರಾಮನ್, ಲಕ್ಷ್ಮಣರಾವ ಜಾಧವ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.