ADVERTISEMENT

ಬೀದರ್: ಪೊಲೀಸ್ ಸಿಬ್ಬಂದಿಗೆ ಗುಳಿಗೆ ಕೊಡುಗೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:11 IST
Last Updated 3 ಜೂನ್ 2021, 17:11 IST
ಚೆನ್ನೈ ಮೂಲದ ಬಯೊ ಮೈಕ್ರಾನ್ ಔಷಧ ಕಂಪನಿಯು ಪೊಲೀಸ್ ಸಿಬ್ಬಂದಿಗೆ ಕೊಡುಗೆಯಾಗಿ ನೀಡಿರುವ ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಳಿಗೆಗಳನ್ನು ಕಂಪನಿಯ ಪ್ರತಿನಿಧಿಗಳು ಬೀದರ್‌‌ನಲ್ಲಿ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರಿಗೆ ಹಸ್ತಾಂತರಿಸಿದರು
ಚೆನ್ನೈ ಮೂಲದ ಬಯೊ ಮೈಕ್ರಾನ್ ಔಷಧ ಕಂಪನಿಯು ಪೊಲೀಸ್ ಸಿಬ್ಬಂದಿಗೆ ಕೊಡುಗೆಯಾಗಿ ನೀಡಿರುವ ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಳಿಗೆಗಳನ್ನು ಕಂಪನಿಯ ಪ್ರತಿನಿಧಿಗಳು ಬೀದರ್‌‌ನಲ್ಲಿ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರಿಗೆ ಹಸ್ತಾಂತರಿಸಿದರು   

ಬೀದರ್: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಪೊಲೀಸ್ ಸಿಬ್ಬಂದಿಗೆ ಚೆನ್ನೈ ಮೂಲದ ಬಯೊ ಮೈಕ್ರಾನ್ ಔಷಧ ಕಂಪನಿಯು ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಳಿಗೆಗಳನ್ನು ಕೊಡುಗೆಯಾಗಿ ನೀಡಿದೆ.

ಕಂಪನಿಯ ಬೀದರ್-ಕಲಬುರ್ಗಿ ಮಾರುಕಟ್ಟೆ ವ್ಯವಸ್ಥಾಪಕ ಜಗನ್ನಾಥಯ್ಯ ಸ್ವಾಮಿ ಅವರು ನಗರದಲ್ಲಿ ಗುರುವಾರ ಪೊಲೀಸ್ ಸಿಬ್ಬಂದಿಗೆ ವಿತರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರಿಗೆ ತಲಾ ಒಂದು ಸಾವಿರ ಒರೊವಿಟ್(Orovit) ಹಾಗೂ ವಿಂಡೋಸ್ (windose) ಗುಳಿಗೆಗಳನ್ನು ಹಸ್ತಾಂತರಿಸಿದರು.

ಪೊಲೀಸ್ ಸಿಬ್ಬಂದಿ ಕೋವಿಡ್‍ನಿಂದ ಜನರ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಯ ಭಾಗವಾಗಿ ಕಂಪನಿಯು ಅವರಿಗೆ ಗುಳಿಗೆಳನ್ನು ದೇಣಿಗೆ ರೂಪದಲ್ಲಿ ಕೊಟ್ಟಿದೆ ಎಂದು ಅವರು ಹೇಳಿದರು.

ADVERTISEMENT

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿ ಸಿಬ್ಬಂದಿಗೂ ತಲಾ 10 ಗುಳಿಗೆಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.

ಕಂಪನಿಯ ಬೀದರ್ ಪ್ರತಿನಿಧಿ ಪ್ರಭು ರತನಗೊಂಡ, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.