ADVERTISEMENT

ಅಧಿಕ ಆದಾಯ: ನಿರ್ವಾಹಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 11 ಮೇ 2022, 11:06 IST
Last Updated 11 ಮೇ 2022, 11:06 IST
ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿ ಡಿಪೊದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು
ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗದಲ್ಲಿ ಅಧಿಕ ಆದಾಯ ತಂದ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿ ಡಿಪೊದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು   

ಬೀದರ್: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅಧಿಕ ಆದಾಯ ತಂದ ನಿರ್ವಾಹಕರು ಹಾಗೂ ಚಾಲಕರನ್ನು ಭಾಲ್ಕಿ ಡಿಪೊದಲ್ಲಿ ಸನ್ಮಾನಿಸಲಾಯಿತು.

ಭಾಲ್ಕಿ-ಉದಗಿರ-ಹೈದರಾಬಾದ್ ಮಾರ್ಗ(ರೂಟ್ ಸಂಖ್ಯೆ 79/80)ದಲ್ಲಿ ₹. 39,261 (ಇಪಿಕೆಎಂ 47.30) ಆದಾಯ ದಾಖಲಿಸಿದ ಭಾಲ್ಕಿ ಡಿಪೊದ ನಿರ್ವಾಹಕ ಆರ್.ಬಿ. ರಮೇಶ, ಚಾಲಕ ಕಂ ನಿರ್ವಾಹಕ ಶಫಿಯೊದ್ದಿನ್, ಚಾಲಕರಾದ ಪ್ರಭಾಕರ ಹಾಗೂ ಅನಿಲಕುಮಾರ ಅವರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಗೌಡಗೇರಿ ಅವರು ಪುಷ್ಪಗುಚ್ಛ ನೀಡಿ, ಅಭಿನಂದಿಸಿದರು.

ಸಂಸ್ಥೆಯ ಭಾಲ್ಕಿ ಘಟಕದ ವ್ಯವಸ್ಥಾಪಕ ಭದ್ರಪ್ಪ, ಕೆಎಂಪಿಎಲ್ ಮಾಸ್ಟರ್ ಶಾಂತವೀರ, ಎಲೆಕ್ಟ್ರಿಷಿಯನ್ ಸಂಜು ಮಾಲಗಾರ್, ಶಿಫ್ಟ್ ಉಸ್ತುವಾರಿ ವಿಶ್ವನಾಥ ಕಾಂಬಳೆ, ಇಎಸ್‍ಟಿ ಮೇಲ್ವಿಚಾರಕ ಝರೆಪ್ಪ, ಸಂಚಾರ ಇನ್‍ಸ್ಪೆಕ್ಟರ್ ಹಣಮಂತ, ಕಿರಿಯ ಸಹಾಯಕ ಶಂಕರ ರಾಜೋಳೆ, ಲೆಕ್ಕ ವಿಭಾಗದ ಕಿರಿಯ ಸಹಾಯಕ ಮಲ್ಲೇಶ ರೆಡ್ಡಿ, ಚಾರ್ಜಮನ್ ಪ್ರಭಾಕರ, ಸಂಚಾರ ನಿಯಂತ್ರಕ ನಿಯಲ್, ಚಾಲಕ ಸುಂದರರಾಜ್, ನಿರ್ವಾಹಕ ಓಂಕಾರ ಗೋಖಲೆ, ರೇವಣಪ್ಪ ದಾಡಗಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.