ADVERTISEMENT

ಬೀದರ್ | ರೈತ–ಚಿಂತಾಕ್ರಾಂತ: ಹೊಲದಲ್ಲಿಯೇ ಕೊಳೆಯುತ್ತಿದೆ ಕಲ್ಲಂಗಡಿ

ಬಸವನವಾಡಿ: ಸಾಲ ತೀರಿಸಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ

ಬಸವರಾಜ ಎಸ್.ಪ್ರಭಾ
Published 17 ಮೇ 2020, 8:15 IST
Last Updated 17 ಮೇ 2020, 8:15 IST
ಭಾಲ್ಕಿ ತಾಲ್ಲೂಕಿನ ಬಸವನವಾಡಿ ಗ್ರಾಮದ ಲಕ್ಷ್ಮಣರಾವ ತಳಿಕಡೆ ಕುಟುಂಬಸ್ಥರು ತಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಾಳಾಗಿರುವುದನ್ನು ತೋರಿಸುತ್ತಿರುವುದು
ಭಾಲ್ಕಿ ತಾಲ್ಲೂಕಿನ ಬಸವನವಾಡಿ ಗ್ರಾಮದ ಲಕ್ಷ್ಮಣರಾವ ತಳಿಕಡೆ ಕುಟುಂಬಸ್ಥರು ತಮ್ಮ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಾಳಾಗಿರುವುದನ್ನು ತೋರಿಸುತ್ತಿರುವುದು   

ಭಾಲ್ಕಿ: ತಾಲ್ಲೂಕಿನ ಬಸವನವಾಡಿ ಗ್ರಾಮದ ರೈತ ಲಕ್ಷ್ಮಣರಾವ ಗೋರಕರಾವ ಅವರು ಬೆಳೆದ ಕಲ್ಲಂಗಡಿ ಹೊಲದಲ್ಲಿಯೇ ಕೊಳೆಯುತ್ತಿದೆ.

ಎರಡೂವರೆ ಎಕರೆಯಲ್ಲಿ ಅವರು ಕಲ್ಲಂಗಡಿ ಬೆಳೆದಿದ್ದರು. ಆದರೆ, ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮಾರುಕಟ್ಟೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಕಲ್ಲಂಗಡಿ ಬೆಳೆಯಲ್ಲಿ ಉತ್ತಮ ಲಾಭ ಪಡೆಯಬಹುದು ಎಂದು ಸಾಲ ಮಾಡಿ ಎರಡೂವರೆ ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ₹2.5 ಲಕ್ಷ ಖರ್ಚು ಮಾಡಿದ್ದೇನೆ. ಕಲ್ಲಂಗಡಿ ಮಾರಾಟದಿಂದ ಕೈ ತುಂಬಾ ಸಂಪಾದನೆ ಮಾಡಿ ಸಾಲ ತೀರಿಸಿ ಉತ್ತಮ ಬದುಕು ನಡೆಸಬೇಕು ಎನ್ನುವಷ್ಟರಲ್ಲಿ ಕೊರೊನಾ ಬಂದು ನಮ್ಮ ಬದುಕನ್ನು ಬೀದಿಗೆ ತಳ್ಳಿತು’ ಎಂದು ರೈತ ಲಕ್ಷ್ಮಣರಾವ ಗೋರಕರಾವ
ಕಣ್ಣಿರಾದರು.

ADVERTISEMENT

‘ಹನಿ ನೀರಾವರಿಗಾಗಿ ಖಾಸಗಿಯವರ ಬಳಿ ಸಾಲ ಮಾಡಿದ್ದರಿಂದ ಬೆಳೆ ನಷ್ಟ ನನ್ನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಸರ್ಕಾರ ನೆರವಿಗೆ ಬರಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.