ADVERTISEMENT

ಖಟಕಚಿಂಚೋಳಿ: ವಿಷ ಸೇವಿಸಿ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2023, 13:48 IST
Last Updated 11 ಆಗಸ್ಟ್ 2023, 13:48 IST
ಬಾಲಾಜಿ ಕೋಟಗ್ಯಾಳೆ
ಬಾಲಾಜಿ ಕೋಟಗ್ಯಾಳೆ   

ಖಟಕಚಿಂಚೋಳಿ: ಸಮೀಪದ ಡಾವರಗಾಂವ್ ಗ್ರಾಮದ ರೈತ ಬಾಲಾಜಿ ಬಾಬುರಾವ್ ಕೋಟಗ್ಯಾಳೆ (28) ಸಾಲಬಾಧೆಯಿಂದ ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೃಷಿಗಾಗಿ ಎಸ್‌ಬಿಐ ಬ್ಯಾಂಕ್ ಸೇರಿದಂತೆ ವಿವಿಧೆಡೆ ಸುಮಾರು ₹2 ಲಕ್ಷ ಸಾಲವಿತ್ತು. ಅಲ್ಲದೇ ಬೇರೆಯವರ ಜಮೀನನ್ನು ವಾರ್ಷಿಕ ಲೆಕ್ಕದಲ್ಲಿ ಹಣ ನೀಡಿ ವ್ಯವಸಾಯ ಮಾಡುತ್ತಿದ್ದರು. ಆದರೆ ಸೂಕ್ತವಾಗಿ ಲಾಭ ಬಾರದಿರುವುದರಿಂದ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಸಾಲಬಾಧೆಯಿಂದ ಮನನೊಂದು ವಿಷ ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಖಟಕಚಿಂಚೋಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT