ADVERTISEMENT

ಮಕ್ಕಳಿಗೆ ಉಚಿತ ಸಿದ್ಧ ಸ್ವರ್ಣ ಪ್ರಾಶನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 14:09 IST
Last Updated 1 ಜನವರಿ 2021, 14:09 IST
ಬೀದರ್‌ನ ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಯಲ್ಲಿ ಶುಕ್ರವಾರ ಆಸ್ಪತ್ರೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಅವರು ಮಗುವೊಂದಕ್ಕೆ ಉಚಿತ ಸಿದ್ಧ ಸ್ವರ್ಣ ಪ್ರಾಶನ ಮಾಡಿಸಿದರು
ಬೀದರ್‌ನ ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಯಲ್ಲಿ ಶುಕ್ರವಾರ ಆಸ್ಪತ್ರೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ಅವರು ಮಗುವೊಂದಕ್ಕೆ ಉಚಿತ ಸಿದ್ಧ ಸ್ವರ್ಣ ಪ್ರಾಶನ ಮಾಡಿಸಿದರು   

ಬೀದರ್: ಇಲ್ಲಿಯ ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆ ಹಾಗೂ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳಿಗೆ ಉಚಿತ ಸಿದ್ಧ ಸ್ವರ್ಣ ಪ್ರಾಶನ ಹಾಗೂ ಒಳರೋಗಿ ಗರ್ಭಿಣಿಯರಿಗೆ ಪುಂಸವನ ಕರ್ಮ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಸರ್ವ ಜನರ ಹಿತಕ್ಕಾಗಿ ಆಸ್ಪತ್ರೆ ಆರಂಭಿಸಲಾಗಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ ಎಂದು ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಯ ಅಧ್ಯಕ್ಷ ಡಾ. ಶಿವಕುಮಾರ ಸ್ವಾಮೀಜಿ ನುಡಿದರು.

ಮಕ್ಕಳ ಹಾಗೂ ಗರ್ಭಿಣಿಯರ ಆರೋಗ್ಯದ ಹಿತದೃಷ್ಟಿಯಿಂದ ಉಚಿತ ಸಿದ್ಧ ಸ್ವರ್ಣ ಪ್ರಾಶನ ಹಾಗೂ ಪುಂಸವನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ಇದೇ ವೇಳೆ ಒಳ ರೋಗಿಗಳಿಗೆ ಉಚಿತ ಊಟ, ವಸತಿ ಸೌಲಭ್ಯ, ವಿಶೇಷ ಕೊಠಡಿಗಳು ಹಾಗೂ ಔಷಧಾಲಯ ಉದ್ಘಾಟಿಸಿದರು.

ಅಸ್ಪತ್ರೆಯ ಸಹ ಕಾರ್ಯದರ್ಶಿ ಬಿ.ಜಿ. ಶೆಟಕಾರ, ಸದಸ್ಯರಾದ ಶಿವಶರಣಪ್ಪ ಸಾವಳಗಿ, ಮಡಿವಾಳಪ್ಪ ಗಂಗಶೆಟ್ಟಿ, ಪ್ರಾಚಾರ್ಯ ಡಾ.ಎ.ಆರ್.ವಿ. ಮೂರ್ತಿ ಇದ್ದರು. ಶೈಲಜಾ ನಿರೂಪಿಸಿದರು. ಡಾ. ಬ್ರಹ್ಮಾನಂದ ಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.