ಬಸವಕಲ್ಯಾಣ: ತಾಲ್ಲೂಕಿನ ಕೊಹಿನೂರಿನಲ್ಲಿ ಭಾನುವಾರ ಗುಂಡುರೆಡ್ಡಿ ಜನಸ್ನೇಹಿ ಬಳಗ ಹಾಗೂ ಕಲಬುರಗಿಯ ಮಣೂರ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಾಟೀಲ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿ,‘ಗುಂಡುರೆಡ್ಡಿ ಜನಸ್ನೇಹಿ ಬಳಗದಿಂದ ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿ ಮಾದರಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಬಡವರಿಗೆ ಅನುಕೂಲ ಆಗಿದೆ’ ಎಂದರು. ಗ್ರಾಮ ಪಂಚಾಯಿತಿ ಸದಸ್ಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಮಲಾಪುರೆ, ನಿವೃತ್ತ ಪ್ರಾಧ್ಯಾಪಕಿ ಸರಸ್ವತಿ ಪಾಟೀಲ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಣಮಂತರಾಯ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀಲ ಅಡೆಪ್ಪಗೋಳ, ವೀರಣ್ಣ ಮೂಲಗೆ, ಶರಣು ಭೂತೆ, ಶರಣು ಹಿರೇಮಠ, ದೇವಿದಾಸ ಸಜ್ಜನ್, ಸುನಿಲ ಜಮಾದಾರ ಹಾಗೂ ಸಂಗಮೇಶ ಕುನಾಳೆ ಇದ್ದರು.
ವೈದ್ಯ ಡಾ.ಶ್ರೀಧರ ಹಾಗೂ ಇತರರು ತಪಾಸಣೆ ಕೈಗೊಂಡರು. 535 ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ನಡೆಸಿ ಔಷಧಿ ವಿತರಿಸಲಾಯಿತು. ನೇತ್ರ ತಪಾಸಣೆಯನ್ನೂ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.