ಹುಲಸೂರ: ‘ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು’ ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಗುರು ಬಸವೇಶ್ವರ ಸಂಸ್ಥಾನ ಮಠದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಪೋಷಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,‘ಉತ್ತಮ ಆಹಾರ ನೀಡುವುದರಿಂದ ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗುತ್ತವೆ’ ಎಂದರು.
ತಹಶೀಲ್ದಾರ್ ಶಿವಾನಂದ ಮೇತ್ರೆ, ತಾ.ಪಂ. ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಪಿಡಿಒ ಸಂದೀಪ್ ಬಿರಾದಾರ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲತಾ.ಎಸ್.ಹಾರಕೂಡೆ, ಕವಿತಾ ಕನಕ, ಜ್ಯೋತಿ ಲಕ್ಷ್ಮಿ ಹಿರೆಮಠ, ಲೊಕೇಶ ಮಾಳದೆ, ಲಕ್ಷ್ಮೀ ಶಾಂತಕುಮಾರ, ಸುವಾಸಿನಿ, ಅಂಗನವಾಡಿ ಕಾರ್ಯಕರ್ತೆಯರಾದ ಚಂದ್ರಕಲಾ, ಸುನಂದಾ, ಮಹಾದೇವಿ, ಜಗದೇವಿ, ಸಾವಿತ್ರಿ, ಆರುತಿ, ಶೋಭಾ, ಅನುಸುಯಾ, ಸಾನಿಕಾ, ಅಂಜನಾ, ವಿಜಯಲಕ್ಷ್ಮಿ, ಶಬನಾ, ಸಂಪತಾ, ಸಹಾಯಕಿಯರಾದ ಸಾರೀಕಾ, ಮಲ್ಲಮ್ಮ, ನಾಗಮ್ಮ, ಸುನೀತಾ ಹಾಗೂ ರೂಪಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.