ಔರಾದ್: ಲಾಕ್ಡೌನ್ ಸಡಿಲಿಕೆ ಆದ ಕಾರಣ ಎರಡು ತಿಂಗಳಿನಿಂದ ಸ್ಥಗಿತವಾದ ಅಂತರರಾಜ್ಯ ಬಸ್ ಸೇವೆ ಸೋಮವಾರ ಪುನರಾರಂಭವಾಗಿದೆ.
‘ಔರಾದ್ ಘಟಕದಿಂದ ಹೈದರಾಬಾದ್, ದೇಗಲೂರ, ಉದಗಿರ್, ಲಾತೂರ್ ಹಾಗೂ ರಾಜ್ಯದ ಬೆಳಗಾವಿ, ಬೆಂಗಳೂರು, ಬಳ್ಳಾರಿ ಸೇರಿದಂತೆ ಮೊದಲ ದಿನ 27 ಕಡೆ ಬಸ್ ಓಡಿಸಲಾಗಿದೆ. ಪ್ರಯಾಣಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕೋವಿಡ್ ನಿಯಮಾನುಸಾರ ಬಸ್ನಲ್ಲಿ ಶೇ 50 ಸೀಟ್ ಮಾತ್ರ ತುಂಬಲಾಗುತ್ತಿದೆ’ ಎಂದು ಇಲ್ಲಿಯ ಘಟಕ ವ್ಯವಸ್ಥಾಪಕ ಮಹಮ್ಮದ್ ನಯೀಮ್ ತಿಳಿಸಿದ್ದಾರೆ.
ಲಾಕ್ಡೌನ್ ತೆರವಿನಿಂದ ಜನ ಕೊಂಚ ನೆಮ್ಮದಿ ಬಿಟ್ಟಿದ್ದಾರೆ. ಸಂಜೆ 5 ಗಂಟೆಗೆ ತನಕ ಅಂಗಡಿಗಳು ತೆರೆಯಲು ಅವಕಾಶ ಇರುವುದರಿಂದ ಗಡಿಬಿಡಿ ಕಮ್ಮಿಯಾಗಿದೆ. ವ್ಯಾಪಾರಿಗಳು ಮಾಸ್ಕ್ ಬಳಸುತ್ತಿದ್ದು, ಜನರಿಗೂ ಕೂಡ ಬಳಸಲು ತಿಳಿಸುತ್ತಿದ್ದಾರೆ. ಈ ನಡುವೆ ಜನರಲ್ಲಿ ಇನ್ನು ಕೋವಿಡ್ ಭಯ ಇದ್ದು ಹೊರ ಬರಲು ಹೆದರುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.