ಬೀದರ್: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಸ್ವಾಮಿನಾಥನ್ ಆಯೋಗದ ಶಿಫಾರಸಿನ ಪ್ರಕಾರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಭೂಮಿ ಸರ್ವೇಗಾಗಿ ಹಣ ತುಂಬಿದರೂ ಸರ್ವೆ ಮಾಡುತ್ತಿಲ್ಲ. ಕೂಡಲೇ ಸರ್ವೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ಕಿಸಾನ ಸಭಾ ರಾಜ್ಯ ಘಟಕದ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ಸದಸ್ಯ ನಜೀರ್ ಅಹ್ಮದ್ ಚೊಂಡಿ, ಮುಖಂಡರಾದ ಗುರುಪಾದಯ್ಯ ಸ್ವಾಮಿ, ಬಾಬುರಾವ್ ವಾಡೇಕರ್, ಶಂಕರರಾವ್ ಕಮಠಾಣ, ಎಂ.ಡಿ.ಖಮರ್ ಪಟೇಲ್, ಅಲಿ ಅಹ್ಮದ್ ಖಾನ್, ಚಂದ್ರಭಾನು, ಕಲ್ಲಪ್ಪ, ಶಫಾಯತ್ ಅಲಿ, ಮಾರುತಿ ಚೊಂಡಿ, ಪ್ರಭು, ರಾಮಣ್ಣ ಅಲ್ಮಾಸಪೂರ, ಶಿವರಾಜ ಭಾಲ್ಕಿ, ಅಹ್ಮದ್ ಜಂಬಗಿ, ಜಗನ್ನಾಥ ಮಹಾರಾಜ, ಸೂರ್ಯಕಾಂತ ದಾಡಗಿ, ಬಸವರಾಜ ಪಾಟೀಲ, ತುಕರಾಮ ಸೋಲಪೂರ, ಗುರುನಾಥ ವಿಶ್ವಕರ್ಮ ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.