ADVERTISEMENT

ಸಿಡಿಲು ಬಡಿದು ಯುವಕ, 15 ಆಡುಗಳ ಸಾವು

​ಪ್ರಜಾವಾಣಿ ವಾರ್ತೆ
Published 29 ಮೇ 2020, 15:56 IST
Last Updated 29 ಮೇ 2020, 15:56 IST
ಮಾರುತಿ ಅಶೋಕ ಸಿಂಗೋಡೆ
ಮಾರುತಿ ಅಶೋಕ ಸಿಂಗೋಡೆ   

ಬೀದರ್: ಜಿಲ್ಲೆಯ ಕಮಲನಗರ, ಔರಾದ್ ಹಾಗೂ ಭಾಲ್ಕಿಯಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ. ಸಿಡಿಲು ಬಡಿದು ಔರಾದ್ ತಾಲ್ಲೂಕಿನಲ್ಲಿ ಯುವಕ ಹಾಗೂ ಠಾಣಾಕುಶನೂರಲ್ಲಿ 15 ಆಡುಗಳು ಮೃತಪಟ್ಟಿವೆ.

ಔರಾದ್ ತಾಲ್ಲೂಕಿನ ಹಿಪ್ಪಳಗಾಂವ ಗ್ರಾಮದಲ್ಲಿ ಮಾರುತಿ ಅಶೋಕ ಸಿಂಗೋಡೆ (28) ಹೊಲದಲ್ಲಿ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಠಾಣಾಕುಶನೂರ ಸಮೀಪದ ಪ್ರವಾಸಿ ಮಂದಿರ ಹತ್ತಿರದ ತಾಂಡಾದಲ್ಲಿ ಪ್ರತಾಪ ಆಡೆ ಅವರ 15 ಆಡುಗಳು ಮೃತಪಟ್ಟಿವೆ. ಠಾಣಾಕುಶನೂರ ಪಿಎಸ್ಐ ವಿ.ಬಿ ಯಾದವಾಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭಾಲ್ಕಿ ತಾಲ್ಲೂಕಿನ ಕೋನಮೆಳಕುಂದಾ ಗ್ರಾಮದಲ್ಲಿ ಜೋರಾಗಿ ಬೀಸಿದ ಗಾಳಿಗೆ ಮರವೊಂದು ಉರುಳಿದೆ. ಯಾವುದೇ ಜೀವ ಹಾನಿಯಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.