ADVERTISEMENT

ಸದಸ್ಯರ ಹಿತರಕ್ಷಣೆ ಆದ್ಯತೆಯಾಗಲಿ: ಗುರುನಾಥ ಜ್ಯಾಂತಿಕರ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 14:06 IST
Last Updated 25 ಮಾರ್ಚ್ 2023, 14:06 IST
ಬೀದರ್‌ನಲ್ಲಿ ಬೀದರ್ ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿಯನ್ನು ಸಂಯುಕ್ತ ಸಹಕಾರಿ ರಾಜ್ಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಉದ್ಘಾಟಿಸಿದರು
ಬೀದರ್‌ನಲ್ಲಿ ಬೀದರ್ ಸೌಹಾರ್ದ ಸಹಕಾರಿ ಸಂಘದ ನೂತನ ಕಚೇರಿಯನ್ನು ಸಂಯುಕ್ತ ಸಹಕಾರಿ ರಾಜ್ಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಉದ್ಘಾಟಿಸಿದರು   

ಬೀದರ್: ಸದಸ್ಯರ ಹಿತರಕ್ಷಣೆ ಸೌಹಾರ್ದ ಸಹಕಾರಿಗಳ ಆದ್ಯತೆಯಾಗಬೇಕು ಎಂದು ಸಂಯುಕ್ತ ಸಹಕಾರಿ ರಾಜ್ಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಹೇಳಿದರು.

ನಗರದ ಶಿವನಗರ ಸಮೀಪ ಬೀದರ್ ಸೌಹಾರ್ದ ಸಹಕಾರಿ ಸಂಘದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬುರಾವ್ ಮದಕಟ್ಟಿ, ವಕೀಲ ಕೆ.ಎಚ್. ಪಾಟೀಲ ಮಾತನಾಡಿದರು. ಸಹಕಾರಿಯ ಮುಖ್ಯ ಪ್ರವರ್ತಕ ಕ್ರಾಂತಿಕುಮಾರ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು.

ಪ್ರವರ್ತಕರಾದ ವಿನೋದ, ಬಸವರಾಜ, ಅರುಣ, ಸೂರ್ಯಕಾಂತ, ಸತೀಶ್, ಸಿದ್ರಾಮಪ್ಪ, ಅನಿಲ್, ಶಹಾಬುದ್ದಿನ್, ವಿನಾಯಕ, ಗುರುಸಿದ್ದ, ಕಲ್ಲಪ್ಪ, ಅಮರ, ಶಾಂತಕುಮಾರ, ಪ್ರೇಮಾ ಬಿರಾದಾರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.