ಜನವಾಡ: ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಸಮಾರೋಪಗೊಂಡಿತು.
ಗ್ರಾಮದ ಪಾಂಡುರಂಗ ಮಂದಿರದಲ್ಲಿ ಏಳು ದಿನ ವಿವಿಧ ಗ್ರಾಮಗಳ ಮಹಾರಾಜರಿಂದ ಹರಿಪಾಠ, ಭಜನೆ, ಕೀರ್ತನೆ ಶ್ರದ್ಧಾ ಭಕ್ತಿಯಿಂದ ನಡೆದವು.
ಸಮಾರೋಪದ ಅಂಗವಾಗಿ ಪಾಂಡುರಂಗ ಮಂದಿರದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾಂಡುರಂಗ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು. ಇದೇ ವೇಳೆ ಮೊಸರು ಗಡಿಗೆ ಒಡೆಯಲಾಯಿತು.
ಗ್ರಾಮದ ವೈಜಿನಾಥ ಮಹಾರಾಜ್, ವಾರಕರಿ ಮಂಡಳಿಯ ಸುಭಾಷ್ ದದ್ದಾಪುರ, ಶ್ರೀಕಾಂತ ಬಿರಾದಾರ, ವೀರಶೆಟ್ಟಿ ಬಿರಾದಾರ, ವಿಜಯಕುಮಾರ ಬಿರಾದಾರ, ಸೋಮು ಕಾಬ್ಜೆ, ಸಂಜುಕುಮಾರ ದಾಮೋದರ, ಹರಿಬಾಯಿ, ಮೀರಾಬಾಯಿ, ಪಾರಮ್ಮ, ಸಂಗಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.