ಬೀದರ್ : ನಗರದ ನೌಬಾದ್ ನಲ್ಲಿರುವ ಆರ್.ಟಿ.ಒಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ದಿಢೀರ್ಭೇಟಿ ನೀಡಿದರು.
ಈ ವೇಳೆ ಕಚೇರಿಯಲ್ಲಿದ್ದ ಖಾಸಗಿ ಬ್ರೋಕರ್, ಸಚಿವರನ್ನು ಕಂಡು ಸ್ಥಳದಿಂದ ಕಾಲ್ಕಿತ್ತರು. ಇದನ್ನು ಕಂಡ ಸಚಿವ ಚೌಹಾಣ್,
ಕಚೇರಿಯಲ್ಲಿ ಖಾಸಗಿ ಬ್ರೋಕರ್ ಯಾಕೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಆಗ ಕಚೇರಿಯಲ್ಲಿ ಬ್ರೋಕರ್ ಇರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.
ಇದರಿಂದ ಕುಪಿತರಾದ ಚೌಹಾಣ್,ನಾನು ಮಂತ್ರಿ, ನಾನೇ ನೋಡಿದೀನಿ. ನನಗೆ ಸುಳ್ಳು ಹೇಳ್ತೀರಾ? ಎಂದು ಕಚೇರಿಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಇಡೀ ಕಚೇರಿಯ ಎಲ್ಲ ವಿಭಾಗಗಳಲ್ಲೂ ದಾಖಲೆ ಪರಿಶೀಲನೆ ನಡೆಸಿದ ಅವರು,
ಸಮರ್ಪಕ ದಾಖಲೆ ತೋರಿಸದ ನೌಕರಸ್ಥರನ್ನುಏನ್ ಕೆಲಸ ಮಾಡ್ತೀರಿ ನೀವು?ಎಂದು ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.