ADVERTISEMENT

‘ಮುಗಿಲ ಮರೆಯ ಮಿಂಚು’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 2:21 IST
Last Updated 11 ಜೂನ್ 2021, 2:21 IST
ಭಾಲ್ಕಿಯಲ್ಲಿ ಸಾಹಿತಿ ವೀರಶೆಟ್ಟಿ ಬಾವುಗೆ ರಚಿಸಿದ ‘ಮುಗಿಲ ಮರೆಯ ಮಿಂಚು’ ಕೃತಿಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ ಬಿಡುಗಡೆ ಮಾಡಿದರು
ಭಾಲ್ಕಿಯಲ್ಲಿ ಸಾಹಿತಿ ವೀರಶೆಟ್ಟಿ ಬಾವುಗೆ ರಚಿಸಿದ ‘ಮುಗಿಲ ಮರೆಯ ಮಿಂಚು’ ಕೃತಿಯನ್ನು ತಾಲ್ಲೂಕು ಕಸಾಪ ಅಧ್ಯಕ್ಷ ಶಶಿಧರ ಕೋಸಂಬೆ ಬಿಡುಗಡೆ ಮಾಡಿದರು   

ಭಾಲ್ಕಿ: ‘ಗಡಿ ಭಾಗದ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಹಿರಿಯ ಸಾಹಿತಿ ವೀರಶೆಟ್ಟಿ ಬಾವುಗೆ ಅವರ ಕೊಡುಗೆ ಅಪಾರವಾಗಿದೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.

ಪಟ್ಟಣದ ವೀರಶೆಟ್ಟಿ ಬಾವುಗೆ ನಿವಾಸದಲ್ಲಿ ಬಾವುಗೆ ಅವರು ರಚಿಸಿದ ‘ಮುಗಿಲ ಮರೆಯ ಮಿಂಚು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

‘ಬಾವುಗೆ ಅವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದುಕೊಂಡು ಕನ್ನಡ ನಾಡು, ನುಡಿಯ ಸೇವೆ ಜತೆಗೆ ಹವ್ಯಾಸಿ ಬರಹಗಾರರಾಗಿ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಬಾವುಗೆ ಅವರ ಅನುಭವದಿಂದ ಇನ್ನಷ್ಟು ಮೇರು ಕೃತಿಗಳು ಹೊರ ಬರಲಿ’ ಎಂದರು.

ADVERTISEMENT

ಕಸಾಪ ಗೌರವ ಕಾರ್ಯದರ್ಶಿ ಹಣಮಂತ ಕಾರಾಮುಂಗೆ, ಸಂಘಟನಾ ಕಾರ್ಯದರ್ಶಿ ಸಂಗಮೇಶ ಮದಕಟ್ಟಿ, ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ, ಖಟಕಚಿಂಚೋಳಿ ವಲಯ ಘಟಕದ ಅಧ್ಯಕ್ಷ ರಾಜಕುಮಾರ ಬಿರಾದಾರ, ಪ್ರಭು ಡಿಗ್ಗೆ, ಸಿದ್ದು ತುಗಶೆಟ್ಟೆ, ಗಿರಿರಾಜ ವಾಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.