ADVERTISEMENT

ಬಸವಕಲ್ಯಾಣ: ಅಫೀಮು ಜಪ್ತಿ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 15:21 IST
Last Updated 27 ನವೆಂಬರ್ 2021, 15:21 IST
ಬಸವಕಲ್ಯಾಣ ತಾಲ್ಲೂಕಿನ ಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಪ್ತಿ ಮಾಡಲಾದ ಅಫೀಮು ಹಾಗೂ ಬಂಧಿತ ಆರೋಪಿಗಳು
ಬಸವಕಲ್ಯಾಣ ತಾಲ್ಲೂಕಿನ ಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಪ್ತಿ ಮಾಡಲಾದ ಅಫೀಮು ಹಾಗೂ ಬಂಧಿತ ಆರೋಪಿಗಳು   

ಬಸವಕಲ್ಯಾಣ: ತಾಲ್ಲೂಕಿನ ಹಳ್ಳಿ ಗ್ರಾಮದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 65ರ ಹೋಟೆಲ್‍ ಬಾಬಾ ರಾಮದೇವ್‍ ಡಾಬಾದಲ್ಲಿ 3.686 ಕೆ.ಜಿ ಪಾಪಿ (ಅಫೀಮು) ಪೌಡರನ್ನು ಅಬಕಾರಿ ಇಲಾಖೆ‌ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಜಪ್ತಿಯಾದ ಅಫೀಮು ಸುಮಾರು ₹ 55 ಸಾವಿರದಷ್ಟು ಇದ್ದು, ಕಾನಾರಾಮ ಚತುರಾ ಹಾಗೂ ಜಗದೀಶ ಪ್ರಹ್ಲಾದ್‍ ಕೌಡಿಯಾಳ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.

ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ, ನಿರೀಕ್ಷಕ ನಾನಾಗೌಡ ಕೆರೂರ್, ಸುರೇಶ್‍ ಶಂಕರ್, ಸಿಬ್ಬಂದಿ ವಿಶ್ವನಾಥ ಸ್ವಾಮಿ, ಸೈಯದ್‍ ವಸೀಂ, ಮಹಮ್ಮದ್‍ ಮತೀನ್‍ ಅವರಿದ್ದ ತಂಡ ದಾಳಿ ನಡೆಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.