
ಪ್ರಜಾವಾಣಿ ವಾರ್ತೆಬೀದರ್: ಉತ್ತರ ಪ್ರದೇಶದ ಸಾಕೇತ ನಗರ(ಅಯೋಧ್ಯ)ದ ಜಮೀನಿನಲ್ಲಿ ದೊರೆಯುತ್ತಿರುವ ಗೌತಮ ಬುದ್ಧನ ವಿಗ್ರಹ, ಸ್ತೂಪ ಹಾಗೂ ಇತರ ಅವಶೇಷಗಳ ರಕ್ಷಣೆಗೆ ಒತ್ತಾಯಿಸಿ ಬುದ್ಧಿಸ್ಟ್ ಇಂಟರ್ನ್ಯಾಷನಲ್ ನೆಟ್ವರ್ಕ್, ಭಾರತೀಯ ಬೌದ್ಧ ಮಹಾಸಭಾ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ನಗರದಲ್ಲಿ ಬುಧವಾರ (ಆ.5) ಮೆರವಣಿಗೆ ನಡೆಸಲು ನಿರ್ಧರಿಸಿವೆ.
ಅಂದು ಬೆಳಿಗ್ಗೆ 11 ಗಂಟೆಗೆ ಜನವಾಡ ರಸ್ತೆಯ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಲಾಗುವುದು ಎಂದು ಬುದ್ಧಿಸ್ಟ್ ಇಂಟರ್ನ್ಯಾಷನಲ್ ನೆಟ್ವರ್ಕ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶಕುಮಾರ ಜೋಜನಾಕರ್, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಗುನ್ನಳ್ಳಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.