ADVERTISEMENT

ಬುದ್ಧನ ಅವಶೇಷಗಳ ರಕ್ಷಣೆ: ನಾಳೆ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 16:13 IST
Last Updated 3 ಆಗಸ್ಟ್ 2020, 16:13 IST

ಬೀದರ್: ಉತ್ತರ ಪ್ರದೇಶದ ಸಾಕೇತ ನಗರ(ಅಯೋಧ್ಯ)ದ ಜಮೀನಿನಲ್ಲಿ ದೊರೆಯುತ್ತಿರುವ ಗೌತಮ ಬುದ್ಧನ ವಿಗ್ರಹ, ಸ್ತೂಪ ಹಾಗೂ ಇತರ ಅವಶೇಷಗಳ ರಕ್ಷಣೆಗೆ ಒತ್ತಾಯಿಸಿ ಬುದ್ಧಿಸ್ಟ್ ಇಂಟರ್‌ನ್ಯಾಷನಲ್ ನೆಟ್‍ವರ್ಕ್, ಭಾರತೀಯ ಬೌದ್ಧ ಮಹಾಸಭಾ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ನಗರದಲ್ಲಿ ಬುಧವಾರ (ಆ.5) ಮೆರವಣಿಗೆ ನಡೆಸಲು ನಿರ್ಧರಿಸಿವೆ.

ಅಂದು ಬೆಳಿಗ್ಗೆ 11 ಗಂಟೆಗೆ ಜನವಾಡ ರಸ್ತೆಯ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಮಾಡಲಾಗುವುದು ಎಂದು ಬುದ್ಧಿಸ್ಟ್ ಇಂಟರ್‌ನ್ಯಾಷನಲ್ ನೆಟ್‍ವರ್ಕ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶಕುಮಾರ ಜೋಜನಾಕರ್, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಗುನ್ನಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT