ADVERTISEMENT

ಔರಾದ್: ರೈತರಿಗೆ ಪಂಪಸೆಟ್‌, ಸಾಮಗ್ರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 15:37 IST
Last Updated 6 ಜನವರಿ 2024, 15:37 IST
ಔರಾದ್ ತಾಲ್ಲೂಕಿನ ಬೋಂತಿ ತಾಂಡಾದಲ್ಲಿ ಶಾಸಕ ಪ್ರಭು ಚವಾಣ್ ಗಂಗಾ ಕಲ್ಯಾಣ ಯೋಜನೆ ಫಲಾನುಭವಿ ರೈತರಿಗೆ ಪಂಪಸೆಟ್‌ ಸಾಮಗ್ರಿ ವಿತರಿಸಿದರು
ಔರಾದ್ ತಾಲ್ಲೂಕಿನ ಬೋಂತಿ ತಾಂಡಾದಲ್ಲಿ ಶಾಸಕ ಪ್ರಭು ಚವಾಣ್ ಗಂಗಾ ಕಲ್ಯಾಣ ಯೋಜನೆ ಫಲಾನುಭವಿ ರೈತರಿಗೆ ಪಂಪಸೆಟ್‌ ಸಾಮಗ್ರಿ ವಿತರಿಸಿದರು   

ಔರಾದ್: ತಾಲ್ಲೂಕಿನ ಬೋಂತಿ ತಾಂಡಾದಲ್ಲಿ ಶನಿವಾರ ತಾಂಡಾ ಅಭಿವೃದ್ಧಿ ನಿಗಮದ ಫಲಾನುಭವಿ ರೈತರಿಗೆ ಪಂಪಸೆಟ್‌ ಹಾಗೂ ಅದಕ್ಕೆ ಬೇಕಾಗುವ ಪೂರಕ ಸಾಮಗ್ರಿ ವಿತರಿಸಲಾಯಿತು.

ಶಾಸಕ ಪ್ರಭು ಚವಾಣ್ ಮಾತನಾಡಿ ರೈತರು ಸ್ವಾವಲಂಬಿ ಬದುಕು ಸಾಗಿಸಬೇಕು. ಅವರೂ ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ ಸರ್ಕಾರದ ಖರ್ಚಿನಲ್ಲಿಯೇ ಅವರ ಹೊಲದಲ್ಲಿ ಕೊಳವೆ ಬಾವಿ ತೋಡಿಸಿ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಲಾಗುತ್ತದೆ.

ನಮ್ಮ ತಾಲ್ಲೂಕಿನಲ್ಲಿ ಅರ್ಹ ರೈತರನ್ನು ಗುರುತಿಸಿ ಅವರಿಗೆ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಇದೇ ವೇಳೆ ಏಳು ಜನ ಫಲಾನುವಿಗಳಿಗೆ ಪಂಪಸೆಟ್‌ ಸಾಮಗ್ರಿ ವಿತರಿಸಿದರು. ಕರ್ನಾಟಕ ತಾಂಡಾ‌ ಅಭಿವೃದ್ಧಿ ನಿಗಮದ ಎಂಜಿನಿಯರ್ ಅನೀಲ ರಾಠೋಡ್, ಸ್ಥಳೀಯ ಮುಖಂಡರು ಇದ್ದರು.
-----------

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.