ADVERTISEMENT

ಬೀದರ್‌ನ ಗುರುದ್ವಾರಕ್ಕೆ ಪಂಜಾಬ್‌ ಸಿಎಂ ಭಗವಂತ್ ಮಾನ್ ತಾಯಿ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 5:43 IST
Last Updated 22 ಏಪ್ರಿಲ್ 2022, 5:43 IST
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತಾಯಿ ಹರ್‌ಪಾಲ್‌ ಕೌರ್ ಬೀದರ್‌ನ ಗುರುದ್ವಾರಕ್ಕೆ ಭೇಟಿ ನೀಡಿ ಗುರುಗ್ರಂಥ ಸಾಹೀಬ ದರ್ಶನ ಪಡೆದರು
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ತಾಯಿ ಹರ್‌ಪಾಲ್‌ ಕೌರ್ ಬೀದರ್‌ನ ಗುರುದ್ವಾರಕ್ಕೆ ಭೇಟಿ ನೀಡಿ ಗುರುಗ್ರಂಥ ಸಾಹೀಬ ದರ್ಶನ ಪಡೆದರು   

ಬೀದರ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತಾಯಿ ಹರ್‌ಪಾಲ್‌ ಕೌರ್ ಇಲ್ಲಿಯ ಗುರುದ್ವಾರಕ್ಕೆ ಭೇಟಿ ನೀಡಿ ಗುರುನಾನಕ್‍ ಝೀರಾ ಹಾಗೂ ಗುರುಗ್ರಂಥ ಸಾಹೀಬ ದರ್ಶನ ಪಡೆದರು.

ಭಗವಂತ್ ಮಾನ್ ಅವರು ಮುಖ್ಯಮಂತ್ರಿಯಾದ ನಂತರ ಹರ್‌ಪಾಲ್‌ ಕೌರ್ ಧಾರ್ಮಿಕ ಯಾತ್ರೆ ಆರಂಭಿಸಿದ್ದು, ಮಹಾರಾಷ್ಟ್ರದ ನಾಂದೇಡದ ಗುರುದ್ವಾರಕ್ಕೆ ಭೇಟಿಕೊಟ್ಟು ದರ್ಶನ ಪಡೆದ ನಂತರ ಬೀದರ್‌ಗೆ ಬಂದಿದ್ದರು. ಜನವಾಡದ ಗುರುದ್ವಾರಕ್ಕೆ ಭೇಟಿಕೊಟ್ಟ ನಂತರ ಮಧ್ಯಾಹ್ನ ಬೀದರ್‌ಗೆ ಬಂದರು.

ಗುರುಗ್ರಂಥ ಸಾಹೀಬ ದರ್ಶನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಗುರುದ್ವಾರದ ಲಂಗರ್‌ನಲ್ಲಿ ಪ್ರಸಾದ ಸ್ವೀಕರಿಸಿದರು. ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರ್‌ ಸಿಂಗ್‌ ಹಾಗೂ ಮನಪ್ರೀತ್‌ ಸಿಂಗ್‌ ಅವರು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಹರ್‌ಪಾಲ್‌ ಕೌರ್ ಅವರನ್ನು ಅಭಿನಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.