ADVERTISEMENT

ಬೀದರ್: 12 ಜನರಿಗೆ ಕಡಿದ ಹುಚ್ಚು ನಾಯಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 0:30 IST
Last Updated 11 ನವೆಂಬರ್ 2025, 0:30 IST
ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಮಗುವಿಗೆ ಹುಚ್ಚುನಾಯಿ ಕಡಿದಿರುವುದನ್ನು ತೋರಿಸುತ್ತಿರುವ ಪಾಲಕ
ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಮಗುವಿಗೆ ಹುಚ್ಚುನಾಯಿ ಕಡಿದಿರುವುದನ್ನು ತೋರಿಸುತ್ತಿರುವ ಪಾಲಕ   

ಭಾಲ್ಕಿ: ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಸೋಮವಾರ ಮಗು ಸೇರಿದಂತೆ ಸುಮಾರು 12 ಜನರಿಗೆ ಹುಚ್ಚು ನಾಯಿ ಕಡಿದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಮನೆ ಮುಂಭಾಗದಲ್ಲಿ ಕುಳಿತವರಿಗೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರಿಗೆ, ಆಟವಾಡುತ್ತಿದ್ದ ಮಕ್ಕಳ ಮೇಲೆ ನಿಶಬ್ದವಾಗಿ ಬಂದು ನಾಯಿ ದಾಳಿ ಮಾಡಿದೆ. ಕೈ, ತೋಳು, ಕಾಲು ಸೇರಿದಂತೆ ದೇಹದ ಇತರ ಭಾಗಗಳಿಗೆ ಕಡಿದಿದೆ. ಕೆಲವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರೆ, ಇನ್ನು ಕೆಲವರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಕೆಲ ಯುವಕರು ನಾಯಿಯನ್ನು ಹಿಡಿಯಲು ಅದನ್ನು ಅಟ್ಟಾಡಿಸಿಕೊಂಡು ಹೋಗಿದ್ದರು. ಆದರೆ ಅದು ಕೈಗೆ ಸಿಗದೆ ಹೊಲದಲ್ಲಿ ಓಡಿ ಹೋಗಿದೆ. ಗ್ರಾಮದಲ್ಲಿನ ನಾಯಿಗಳ ನಿಯಂತ್ರಣಕ್ಕೆ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ನಿವಾಸಿಗಳು ಒತ್ತಾಯಿಸುತ್ತಾರೆ.

ADVERTISEMENT
ಭಾಲ್ಕಿ ತಾಲ್ಲೂಕಿನ ಕಣಜಿ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿರುವ ವಯೋವೃದ್ಧ
ನಾಯಿ ಕಡಿತಕ್ಕೆ ಒಳಗಾಗಿದ್ದ ಎರಡು ವರ್ಷದ ಮಗು ವಯೋವೃದ್ಧ ನಾಲ್ಕು ಜನ ವಯಸ್ಕರು ಸೇರಿದಂತೆ ಒಟ್ಟು ಆರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
– ಡಾ. ಕೃಷ್ಣಾ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.