ADVERTISEMENT

ರಾಮಾಯಣ ಓದಿದರೆ ಬಾಳಿಗೆ ಬೆಳಕು; ಜೈಕಿಶನ್ ಬಿಯಾಣಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 5:07 IST
Last Updated 11 ಏಪ್ರಿಲ್ 2022, 5:07 IST
ಭಾಲ್ಕಿಯ ರಾಮ ಮಂದಿರದಲ್ಲಿ ಮಾರವಾಡಿ ಸಮಾಜ ವತಿಯಿಂದ ರಾಮ ನವಮಿ ಆಚರಿಸಲಾಯಿತು
ಭಾಲ್ಕಿಯ ರಾಮ ಮಂದಿರದಲ್ಲಿ ಮಾರವಾಡಿ ಸಮಾಜ ವತಿಯಿಂದ ರಾಮ ನವಮಿ ಆಚರಿಸಲಾಯಿತು   

ಭಾಲ್ಕಿ: ರಾಮಾಯಣ ಗ್ರಂಥ ಓದುವುದರಿಂದ ಪ್ರತಿಯೊಬ್ಬರ ಬಾಳು ಬೆಳಗುತ್ತದೆ ಎಂದು ಉದ್ಯಮಿ ಜೈಕಿಶನ್ ಬಿಯಾಣಿ ಅಭಿಪ್ರಾಯಪಟ್ಟರು.

ಪಟ್ಟಣದ ರಾಮ (ಬಾಲಾಜಿ) ಮಂದಿರದಲ್ಲಿ ಭಾನುವಾರ ಶ್ರೀರಾಮ ನವಮಿ ಪ್ರಯುಕ್ತ ಮಾರವಾಡಿ ಸಮಾಜ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು ‌‌ಮಾತನಾಡಿದರು.

ರಾಮಾಯಣದ ಕಥೆಯು ನಿತ್ಯ ನೂತನವಾಗಿದೆ. ರಾಮಾಯಣ ಓದುವುದರಿಂದ ಕುಟುಂಬ ಸದಸ್ಯರು ಹೇಗೆ ಬಾಳಬೇಕು? ಮನೆಯ ಯಜ ಮಾನನ ಕರ್ತವ್ಯ ಏನು? ರಾಜ್ಯ ವನ್ನಾಳುವ ರಾಜರ ಜವಾಬ್ದಾರಿ ಯಾವುವು? ಪ್ರಜೆಗಳ ಕರ್ತವ್ಯಗಳು ಏನು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತವೆ ಎಂದರು.

ADVERTISEMENT

ಬದುಕಿನ ಸೂತ್ರಗಳಾದ ಶಾಂತಿ, ತ್ಯಾಗ, ನೆಮ್ಮದಿಯನ್ನು ರಾಮಾಯಣ ದಿಂದ ಕಲಿಯಬಹುದು ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಸೇರಿದಂತೆ ಹಲವು ಮುಖಂಡರು ರಾಮ ಮಂದಿರಕ್ಕೆ ಭೇಟಿ ನೀಡಿ, ದೇವರ ದರ್ಶನ ಮಾಡಿದರು.

ಮುಖಂಡರಾದ ಶ್ರೀವಲ್ಲಭ ಲೋಯಾ, ಸುರೇಶ ಮಾಲಪಾಣಿ, ಶ್ರೀಕಿಶನ ಲೋಯಾ, ಭಗವತಿ ಪ್ರಸಾದ ಶರ್ಮಾ, ವಲ್ಲಭ ಹೇಡಾ, ಸುಶೀಲ ಶರ್ಮಾ, ಪುನಮಚಂದ ತಿವಾರಿ, ಸುನಿಲ್‌ ಲಖೇರಾ, ವಿಜಯ ರಾಠಿ, ಜಯಕುಮಾರ ನಬೆರಿಯಾ, ಪುರುಷೋತ್ತಮ ಶರ್ಮಾ, ಹೇಮಂತ ನಬೆರಿಯಾ, ರಾಜು ಖಂಡೆಲವಾಲ್‌, ಮನೋಜ ಲೊಯಾ, ನರಸಿಂಗ ಭಟ್ಟದ, ನವಲ ಲೋಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.