ADVERTISEMENT

ರಂಜಾನ್‌: ಮನೆಯಲ್ಲೇ ಪ್ರಾರ್ಥನೆ ಮಾಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 15:54 IST
Last Updated 24 ಏಪ್ರಿಲ್ 2020, 15:54 IST
ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ
ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ   

ಬೀದರ್‌: ಕೋವಿಡ್‌ 19 ಹರಡುವಿಕೆ ಭೀತಿ ಇರುವ ಕಾರಣ ಕರ್ನಾಟಕ ವಕ್ಫ್‌ ಮಂಡಳಿಯ ಸೂಚನೆಯಂತೆ ಮುಸ್ಲಿಂ ಸಮುದಾಯದ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕು ಎಂದು ಇಲ್ಲಿಯ ಮೌಲಾನಾ ಸಯ್ಯದ್‌ ಅಬ್ದುಲ್‌ ವಹೀದ್‌ ಖಾಸ್ಮಿ ಮನವಿ ಮಾಡಿದ್ದಾರೆ.

ಕೊರೊನಾದಿಂದಾಗಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ. ಕರ್ನಾಟಕ ವಕ್ಫ್‌ ಬೋರ್ಡ್‌ ಸೂಚನೆಯಂತೆ ಕೇವಲ ಮೂವರು ಮಾತ್ರ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಉಳಿದವರು ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿ ದೇವರನ್ನು ಸ್ಮರಿಸಬೇಕು ಎಂದು ಹೇಳಿದ್ದಾರೆ.

ಸಂಜೆ ಇಫ್ತಾರ್ ಹಾಗೂ ಮಸೀದಿಗಳಲ್ಲಿ ಸಾಮೂಹಿಕ ಊಟದ ವ್ಯವಸ್ಥೆಯೂ ಇರುವುದಿಲ್ಲ. ಕರ್ನಾಟಕ ವಕ್ಫ್‌ ಬೋರ್ಡ್‌ ಸೂಚಿಸಿದ 14 ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಾನವೀಯತೆ ನೆಲೆಯಲ್ಲಿ ನಡೆದುಕೊಳ್ಳುವ ಜತೆಗೆ ಬಡವರಿಗೆ ದಾನ ಕೊಡುವುದನ್ನು ಮುಂದುವರಿಸಬೇಕು. ಬಡವರ ಸಂಕಷ್ಟ ತೊಲಗಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.