ಬೀದರ್: ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ನವದೆಹಲಿಯ ನಿವಾಸಕ್ಕೆ ಯೋಗಗುರು ರಾಮದೇವ ಬಾಬಾ ಭೇಟಿ ನೀಡಿದರು.
ಖೂಬಾ ಅವರು ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಿ ಬಾಬಾ ಅವರ ಆಶೀರ್ವಾದ ಪಡೆದರು.
ಮೋದಿ ಅವರ ಸಂಪುಟದಲ್ಲಿ ದೊರೆತ ಅವಕಾಶ ಬಳಸಿಕೊಂಡು ದೇಶದ ಜನರಿಗೆ ಒಳಿತು ಮಾಡಬೇಕು ಎಂದು ರಾಮದೇವ ಬಾಬಾ ಸಲಹೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.