ಬೀದರ್: ದಿನೇಶ್ ಆರ್. ವಾಂಖೇಡೆ ಕಲಾ ತಂಡ ರಚಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಿದ್ರಿ ಕಲಾವಿದ ಶಾಹ ರಶೀದ್ ಅಹಮ್ಮದ್ ಖಾದ್ರಿ ಅವರ ಜೀವನ ಚರಿತ್ರೆ ಹಾಗೂ ಬಿದ್ರಿ ಕಲೆ ಕುರಿತ ಸಂಶೋಧನಾ ಕೃತಿಯನ್ನು ನಗರದಲ್ಲಿ ಬಿಡುಗಡೆ ಮಾಡಲಾಯಿತು.
ಶಾ ರಶೀದ್ ಅಹಮ್ಮದ್ ಖಾದ್ರಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಖಾದ್ರಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕಲ್ಯಾಣ ಕರ್ನಾಟಕದ ಮೊದಲ ವ್ಯಕ್ತಿಯಾಗಿದ್ದಾರೆ ಎಂದು ದಿನೇಶ್ ಆರ್. ವಾಂಖೇಡೆ ಹೇಳಿದರು.
ಸುನೀಲಕುಮಾರ ಮಹಾಗಾಂವ್, ಸಂಜುಕುಮಾರ ಭಂಡೆ, ಅಜಯ ರಾಂಪುರೆ, ಚಂದ್ರಶೇಖರ ಅರಕೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.