ಬೀದರ್: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣಯ್ಯ ಬಣ)ಯ ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆಯಲ್ಲಿ ನಗರದ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಭಾಲ್ಕಿ ತಾಲ್ಲೂಕು: ವಿಶ್ವನಾಥ ಚಿಲಶೆಟ್ಟಿ (ಗೌರವಾಧ್ಯಕ್ಷ), ನಾಗೇಂದ್ರಪ್ಪ ತರನಳ್ಳಿ (ಅಧ್ಯಕ್ಷ), ಭಾವರಾವ್ ನೆಲವಾಡೆ (ಉಪಾಧ್ಯಕ್ಷ), ಪರಮೇಶ್ವರ ಗೌರ (ಸಂಘಟನಾ ಕಾರ್ಯದರ್ಶಿ) ಮತ್ತು ನಾಮದೇವ (ಖಜಾಂಚಿ).
ಬಸವಕಲ್ಯಾಣ ತಾಲ್ಲೂಕು: ರುದ್ರಯ್ಯ ಸ್ವಾಮಿ (ಅಧ್ಯಕ್ಷ), ಸಂತೋಷಕುಮಾರ ಗುದಗೆ, ಬಾಬುರಾವ್(ಉಪಾಧ್ಯಕ್ಷರು) ಹಾಗೂ ಅಣವೀರ ಬಿರಾದಾರ (ಕಾರ್ಯದರ್ಶಿ).
ಕಮಲನಗರ ತಾಲ್ಲೂಕು: ಸಂಗಶೆಟ್ಟೆಪ್ಪ ದಾನಾ (ಅಧ್ಯಕ್ಷ). ಔರಾದ್ ತಾಲ್ಲೂಕು: ಪ್ರಕಾಶ ಅಲಮಾಜೆ (ಅಧ್ಯಕ್ಷ), ಅಂಬಾದಾಸ, ಪ್ರಭುದಾಸ (ಉಪಾಧ್ಯಕ್ಷರು) ಮತ್ತು ರಮೇಶ ಬಿರಾದಾರ (ಕಾರ್ಯದರ್ಶಿ). ಹುಮನಾಬಾದ್ ತಾಲ್ಲೂಕು: ಮುಖಿಮುದ್ದೀನ್ ಪಟೇಲ್ (ಅಧ್ಯಕ್ಷ) ಹಾಗೂ ಶರಣಯ್ಯ ಸ್ವಾಮಿ (ಉಪಾಧ್ಯಕ್ಷ).
ಜಿಲ್ಲಾ ಮಹಿಳಾ ಘಟಕ: ಶಾಂತಾಬಾಯಿ ಮೂಲಗೆ (ಅಧ್ಯಕ್ಷೆ). ಬಸವಕಲ್ಯಾಣ ತಾಲ್ಲೂಕು: ಕಮಳಾಬಾಯಿ ಮಡ್ಡೆ (ಅಧ್ಯಕ್ಷ), ಕವಿತಾ ಮತ್ತು ಮಹಾನಂದ (ಉಪಾಧ್ಯಕ್ಷ). ಭಾಲ್ಕಿ ತಾಲ್ಲೂಕು: ಭಾಗೀರಥಿ ಇಟಗೆ (ಅಧ್ಯಕ್ಷ), ನಾಗಮ್ಮ ಲಂಜವಾಡೆ (ಉಪಾಧ್ಯಕ್ಷ) ಹಾಗೂ ಜಗದೇವಿ ವಲಂಡೆ (ಪ್ರಧಾನ ಕಾರ್ಯದರ್ಶಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.