ADVERTISEMENT

ರೈತ ಸಂಘ ತಾಲ್ಲೂಕು ಘಟಕ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 15:38 IST
Last Updated 5 ಆಗಸ್ಟ್ 2020, 15:38 IST
ಬೀದರ್‌ನ ರೈತ ಭವನದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣಯ್ಯ ಬಣ)ಯ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು
ಬೀದರ್‌ನ ರೈತ ಭವನದಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣಯ್ಯ ಬಣ)ಯ ಸಭೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು   

ಬೀದರ್: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣಯ್ಯ ಬಣ)ಯ ತಾಲ್ಲೂಕು ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆಯಲ್ಲಿ ನಗರದ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಭಾಲ್ಕಿ ತಾಲ್ಲೂಕು: ವಿಶ್ವನಾಥ ಚಿಲಶೆಟ್ಟಿ (ಗೌರವಾಧ್ಯಕ್ಷ), ನಾಗೇಂದ್ರಪ್ಪ ತರನಳ್ಳಿ (ಅಧ್ಯಕ್ಷ), ಭಾವರಾವ್ ನೆಲವಾಡೆ (ಉಪಾಧ್ಯಕ್ಷ), ಪರಮೇಶ್ವರ ಗೌರ (ಸಂಘಟನಾ ಕಾರ್ಯದರ್ಶಿ) ಮತ್ತು ನಾಮದೇವ (ಖಜಾಂಚಿ).

ADVERTISEMENT

ಬಸವಕಲ್ಯಾಣ ತಾಲ್ಲೂಕು: ರುದ್ರಯ್ಯ ಸ್ವಾಮಿ (ಅಧ್ಯಕ್ಷ), ಸಂತೋಷಕುಮಾರ ಗುದಗೆ, ಬಾಬುರಾವ್(ಉಪಾಧ್ಯಕ್ಷರು) ಹಾಗೂ ಅಣವೀರ ಬಿರಾದಾರ (ಕಾರ್ಯದರ್ಶಿ).

ಕಮಲನಗರ ತಾಲ್ಲೂಕು: ಸಂಗಶೆಟ್ಟೆಪ್ಪ ದಾನಾ (ಅಧ್ಯಕ್ಷ). ಔರಾದ್ ತಾಲ್ಲೂಕು: ಪ್ರಕಾಶ ಅಲಮಾಜೆ (ಅಧ್ಯಕ್ಷ), ಅಂಬಾದಾಸ, ಪ್ರಭುದಾಸ (ಉಪಾಧ್ಯಕ್ಷರು) ಮತ್ತು ರಮೇಶ ಬಿರಾದಾರ (ಕಾರ್ಯದರ್ಶಿ). ಹುಮನಾಬಾದ್ ತಾಲ್ಲೂಕು: ಮುಖಿಮುದ್ದೀನ್‌ ಪಟೇಲ್ (ಅಧ್ಯಕ್ಷ) ಹಾಗೂ ಶರಣಯ್ಯ ಸ್ವಾಮಿ (ಉಪಾಧ್ಯಕ್ಷ).

ಜಿಲ್ಲಾ ಮಹಿಳಾ ಘಟಕ: ಶಾಂತಾಬಾಯಿ ಮೂಲಗೆ (ಅಧ್ಯಕ್ಷೆ). ಬಸವಕಲ್ಯಾಣ ತಾಲ್ಲೂಕು: ಕಮಳಾಬಾಯಿ ಮಡ್ಡೆ (ಅಧ್ಯಕ್ಷ), ಕವಿತಾ ಮತ್ತು ಮಹಾನಂದ (ಉಪಾಧ್ಯಕ್ಷ). ಭಾಲ್ಕಿ ತಾಲ್ಲೂಕು: ಭಾಗೀರಥಿ ಇಟಗೆ (ಅಧ್ಯಕ್ಷ), ನಾಗಮ್ಮ ಲಂಜವಾಡೆ (ಉಪಾಧ್ಯಕ್ಷ) ಹಾಗೂ ಜಗದೇವಿ ವಲಂಡೆ (ಪ್ರಧಾನ ಕಾರ್ಯದರ್ಶಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.