ADVERTISEMENT

ಸೇವಾ ಕೇಂದ್ರ ಬಂದ್: ಪರದಾಟ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 3:18 IST
Last Updated 3 ಆಗಸ್ಟ್ 2021, 3:18 IST
ಹುಮನಾಬಾದ್ ಪಟ್ಟಣದ ಭಗತ್‌ಸಿಂಗ್‌ ಶಾಲೆಯಲ್ಲಿ ನಡೆದ ಸಭೆಯನ್ನು ಅಂಕುಶ್ ಗೋಖಲೆ ಉದ್ಘಾಟಿಸಿದರು
ಹುಮನಾಬಾದ್ ಪಟ್ಟಣದ ಭಗತ್‌ಸಿಂಗ್‌ ಶಾಲೆಯಲ್ಲಿ ನಡೆದ ಸಭೆಯನ್ನು ಅಂಕುಶ್ ಗೋಖಲೆ ಉದ್ಘಾಟಿಸಿದರು   

ಬಸವಕಲ್ಯಾಣ: ತಾಲ್ಲೂಕಿನಲ್ಲಿನ ಬ್ಯಾಂಕ್ ಮಿತ್ರ ಕೇಂದ್ರಗಳನ್ನು ಬಂದ್ ಮಾಡಿ ‘ಮಿತ್ರರು’ ಎರಡು ದಿನಗಳಿಂದ ಮುಷ್ಕರ ನಡೆಸುತ್ತಿರುವ ಕಾರಣ ಗ್ರಾಹಕರು ಪರದಾಡುವಂತಾಗಿದೆ.

ಪ್ರತಿ ಗ್ರಾಮಗಳಲ್ಲಿ ಪ್ರತಿ ಬ್ಯಾಂಕ್‌ನ ಒಂದೊಂದು ಬ್ಯಾಂಕ್ ಮಿತ್ರ ಕೇಂದ್ರಗಳಿವೆ. ವೇತನ ಪರಿಷ್ಕರಣೆ ಮಾಡಬೇಕು. ಎಲ್ಲ ಮಿತ್ರರಿಗೆ ಒಂದೇ ರೀತಿಯ ಸಂಭಾವನೆ ನಿಗದಿಪಡಿಸಬೇಕು. ಪಿ.ಎಫ್, ಗ್ಯಾಚುಯಿಟಿ ಒಳಗೊಂಡು ಇತರೆ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಷ್ಕರ ನಡೆಯುತ್ತಿದೆ. ಹೀಗಾಗಿ ನಗರದಲ್ಲಿನ ಎಲ್ಲ ಬ್ಯಾಂಕ್‌ಗಳಲ್ಲಿ ಗ್ರಾಹಕರ ನೂಕು ನುಗ್ಗಲಾಗುತ್ತಿದ್ದು ಕೆಲಸದ ಒತ್ತಡ ಹೆಚ್ಚಾಗಿದೆ.

‘ರಾಜ್ಯದಾದ್ಯಂತ ಮುಷ್ಕರ ನಡೆಯುತ್ತಿದೆ. ಬೀದರ್ ಜಿಲ್ಲೆಯಲ್ಲೂ ಬ್ಯಾಂಕ್ ಮಿತ್ರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಕಾಳೆ ನೇತೃತ್ವದಲ್ಲಿ ಸಭೆ ನಡೆಸಿ ಆಗಸ್ಟ್ 10 ರವರೆಗೆ ಮುಷ್ಕರ ಮುಂದುವರಿಸಲು ತೀರ್ಮಾನಿಸಲಾಗಿದೆ. ಸರ್ಕಾರ ಬೇಡಿಕೆ ಈಡೇರಿಸುವವರೆಗೆ ಹೋರಾಟ ನಡೆಸಲಾಗುತ್ತದೆ’ ಎಂದು ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸತೀಶ ಜೋತೆಪ್ಪ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.