ADVERTISEMENT

ಪೌರಕಾರ್ಮಿಕ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 2:51 IST
Last Updated 27 ಜನವರಿ 2021, 2:51 IST
ಚಿಟಗುಪ್ಪ ಪುರಸಭೆ ಕಚೇರಿ ಚಾವಣಿ ಮೇಲೆ ಮಂಗಳವಾರ ಧ್ವಜಾರೋಹಣ ನೆರವೇರಿಸಿದ ತಕ್ಷಣ ನೇಣು ಹಾಕಿಕೊಳ್ಳಲು ಯತ್ನಿಸಿದ ಪೌರಕಾರ್ಮಿಕ ರಾಘವೇಂದ್ರ ಅವರನ್ನು ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ರಕ್ಷಿಸಿದರು
ಚಿಟಗುಪ್ಪ ಪುರಸಭೆ ಕಚೇರಿ ಚಾವಣಿ ಮೇಲೆ ಮಂಗಳವಾರ ಧ್ವಜಾರೋಹಣ ನೆರವೇರಿಸಿದ ತಕ್ಷಣ ನೇಣು ಹಾಕಿಕೊಳ್ಳಲು ಯತ್ನಿಸಿದ ಪೌರಕಾರ್ಮಿಕ ರಾಘವೇಂದ್ರ ಅವರನ್ನು ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ರಕ್ಷಿಸಿದರು   

ಚಿಟಗುಪ್ಪ: ಇಲ್ಲಿಯ ಪುರಸಭೆ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ತಕ್ಷಣ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕ ರಾಘವೇಂದ್ರ ರೇವಣಸಿದ್ದಪ್ಪ ಅವರು ಕಟ್ಟಡದ ಚಾವಣಿ ಮೇಲೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಮಂಗಳವಾರ ಸಂಭವಿಸಿದೆ.

‘ಎರಡು ತಿಂಗಳಿಂದ ಪೌರಕಾರ್ಮಿಕರ ಸಂಬಳ ಆಗದೇ ಇರುವುದರಿಂದ ಕುಟುಂಬದ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದೇನೆ’ ಎಂದು ರಾಘವೇಂದ್ರ ತಿಳಿಸಿದ್ದಾರೆ.

‘ಧ್ವಜಾರೋಹಣ ನೆರವೇರಿಸಿದ ತಕ್ಷಣ ಎಲ್ಲರೂ ನಿಲ್ಲಿ ಎಂಬ ಜೋರಾದ ಶಬ್ದ ಕಟ್ಟಡದ ಮೇಲಿ ನಿಂದ ಕೇಳಿಬಂತು. ಆಗ ಎಲ್ಲರೂ ಮೇಲೆ ನೋಡಿದೆವು. ರಾಘವೇಂದ್ರ ಅವರು ಕೊರಳಿಗೆ ಹಗ್ಗದ ಕುಣಿಕೆ ಹಾಕಿಕೊಂಡು ಕಟ್ಟಡದಿಂದ ಕೆಳಗೆ ಜಿಗಿಯಲು ಯತ್ನಿಸಿದರು. ತಕ್ಷಣ ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ಚಾವಣಿ ಮೇಲೆ ಹೋಗಿ ಅವರನ್ನು ಕಾಪಾಡಿದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಈ ಕುರಿತು ಮುಖ್ಯಾಧಿಕಾರಿ ಶ್ರೀಪಾದ್ ರಾಜಪುರೋಹಿತ, ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.