ಬೀದರ್: ಜಿಲ್ಲೆಯ ಆರು ಮಂದಿ ಅಂಗವಿಕಲರಿಗೆ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ತಮ್ಮ ಅನುದಾನದಲ್ಲಿ ತ್ರಿಚಕ್ರ ಸೈಕಲ್ ಒದಗಿಸಿ ನೆರವಾಗಿದ್ದಾರೆ.
ಇಲ್ಲಿಯ ನಗರಸಭೆ ಕಚೇರಿ ಆವರಣದಲ್ಲಿ ವಿಜಯಸಿಂಗ್ ಅವರು ಬುಧವಾರ ಬಸವಕಲ್ಯಾಣ ತಾಲ್ಲೂಕಿನ ಅಲಗೂಡದ ಚಂದ್ರಕಾಂತ ಸಿದ್ರಾಮಪ್ಪ, ಬೀದರ್ನ ವಿದ್ಯಾನಗರದ ಮೀನಾಕ್ಷಿ ಮಾರುತಿ, ನಾಗೂರ(ಬಿ)ದ ಸುಭಾಷ ಮನ್ಮಥಪ್ಪ, ಔರಾದ್ ತಾಲ್ಲೂಕಿನ ಡೊಣಗಾಂವ್ನ ಹಣಮಂತ ಮಾಧವರಾವ್, ಜಂಬಗಿಯ ಮಹಮ್ಮದ್ ಸಲಾವುದ್ದಿನ್ ಬಾಬುಮಿಯಾ ಹಾಗೂ ಮಹಾರಾಜವಾಡಿಯ ಮಹಮ್ಮದ್ ಅಮೀರ್ಖಾನ್ ಅವರಿಗೆ ತ್ರಿಚಕ್ರ ವಾಹನಗಳ ಬೀಗದ ಕೈ ನೀಡಿದರು.
ತ್ರಿಚಕ್ರ ವಾಹನಕ್ಕಾಗಿ ಫಲಾನುಭವಿಗಳು ಕೋರಿಕೆ ಸಲ್ಲಿಸಿದ್ದರು. ಅವರಿಗೆ ನೆರವಾಗಲು ಶಾಸಕರ ಸ್ಥಳೀಯ ಕ್ಷೇತ್ರ ಪ್ರದೇಶಾಭಿವೃದ್ಧಿ ಯೋಜನೆಯಡಿ ತ್ರಿಚಕ್ರ ಸೈಕಲ್ ವಿತರಿಸಲಾಗಿದೆ ಎಂದು ಹೇಳಿದರು.
ಪೌರಾಯುಕ್ತ ರವೀಂದ್ರ ಅಂಗಡಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಠಪತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.