ಬೀದರ್: ಯುದ್ಧ ಪೀಡಿತ ಉಕ್ರೇನ್ನಿಂದ ಬೀದರ್ನ ಇಬ್ಬರು ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ.
ಸಿದ್ದರಾಮಯ್ಯ ಲೇಔಟ್ನ ವಿವೇಕಾನಂದ ವೈಜಿನಾಥ ಮಡಕೆ ಹಾಗೂ ಶಶಾಂಕ ವಿಜಯಕುಮಾರ ದೊಡ್ಡಗಾಣಿಗೇರ್ ಅವರು ಉಕ್ರೇನ್ನಿಂದ ರೋಮಾನಿಯಾ ಗಡಿ ತಲುಪಿ ವಿಶೇಷ ವಿಮಾನದ ಮೂಲಕ ದೆಹಲಿಗೆ ಬಂದು ಕರ್ನಾಟಕ ಭವನದಲ್ಲಿ ತಂಗಿದ್ದರು.
ಅಲ್ಲಿಂದ ವಿಮಾನದ ಮೂಲಕ ಹೈದರಾಬಾದ್ಗೆ ಬಂದಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರನ್ನು ಪಾಲಕರು ಸ್ವಾಗತಿಸಿದರು. ಅಲ್ಲಿಂದ ಪಾಲಕರೊಂದಿಗೆ ಬೀದರ್ ತಲುಪಿದರು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.