ADVERTISEMENT

ಬಸವಕಲ್ಯಾಣ: ಅನಧಿಕೃತ ರಸಗೊಬ್ಬರ ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:11 IST
Last Updated 24 ಜೂನ್ 2021, 5:11 IST
ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿಯಲ್ಲಿ‌ ಅನಧಿಕೃತವಾಗಿ ಮಾರಾಟ ಮಾಡುತಿದ್ದ ಗೊಬ್ಬರ ಬುಧವಾರ ಕೃಷಿ ಇಲಾಖೆಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ
ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿಯಲ್ಲಿ‌ ಅನಧಿಕೃತವಾಗಿ ಮಾರಾಟ ಮಾಡುತಿದ್ದ ಗೊಬ್ಬರ ಬುಧವಾರ ಕೃಷಿ ಇಲಾಖೆಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ   

ಬಸವಕಲ್ಯಾಣ: ತಾಲ್ಲೂಕಿನ ಮೋರಖಂಡಿಯಲ್ಲಿ ಬುಧವಾರ ಅನಧಿಕೃತವಾಗಿ ಸಂಗ್ರಹಿಸಿದ್ದ ₹3,20,000 ಮೌಲ್ಯದ ರಸಗೊಬ್ಬರ ಕೃಷಿ ಇಲಾಖೆಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ.

ತಳಭೋಗ ಗ್ರಾಮದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ₹43,000 ಮೌಲ್ಯದ ಕೀಟನಾಶಕ ವಶ ಪಡಿಸಿಕೊಳ್ಳಲಾಗಿದೆ.

ಜಾಗೃತ ದಳದವರಾದ ಜಂಟಿ ಕೃಷಿ‌ ನಿರ್ದೇಶಕಿ ತಾರಾಮಣಿ, ಕೃಷಿ ಇಲಾಖೆಯ ಸಹಾಯಕ‌ ನಿರ್ದೇಶಕ ಎಂ.ಜೆ.ಅನ್ಸಾರಿ, ವೀರಶೆಟ್ಟಿ ರಾಠೋಡ, ಮಾರ್ಥಂಡ, ಕೈಲಾಸನಾಥ ನೇತೃತ್ವದಲ್ಲಿ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.