ADVERTISEMENT

ಸಂಭ್ರಮದ ವೀರಭದ್ರೇಶ್ವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:14 IST
Last Updated 19 ಡಿಸೆಂಬರ್ 2019, 10:14 IST
ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಶರಭಾವತಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ರಥೋತ್ಸವಕ್ಕೆ ಸಂಸದ ಭಗವಂತ ಖೂಬಾ ಚಾಲನೆ ನೀಡಿದರು. ಶೈಲೇಂದ್ರ ಬೆಲ್ದಾಳೆ, ಕುಶಾಲರಾವ್ ಯಾಬಾ, ಡಾ. ರಾಜಶೇಖರ ಶಿವಾಚಾರ್ಯ, ಶಿವಯ್ಯ ಸ್ವಾಮಿ ಇದ್ದರು
ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಶರಭಾವತಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ರಥೋತ್ಸವಕ್ಕೆ ಸಂಸದ ಭಗವಂತ ಖೂಬಾ ಚಾಲನೆ ನೀಡಿದರು. ಶೈಲೇಂದ್ರ ಬೆಲ್ದಾಳೆ, ಕುಶಾಲರಾವ್ ಯಾಬಾ, ಡಾ. ರಾಜಶೇಖರ ಶಿವಾಚಾರ್ಯ, ಶಿವಯ್ಯ ಸ್ವಾಮಿ ಇದ್ದರು   

ಜನವಾಡ: ಶರಭಾವತಾರ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ನಡೆಯಿತು.

ಜಾತ್ರೆ ಪ್ರಯುಕ್ತ ದೇವಸ್ಥಾನದಲ್ಲಿ ಬೇಮಳಖೇಡ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರ ನೇತೃತ್ವದಲ್ಲಿ ಧರ್ಮಸಭೆ, ಪಲ್ಲಕ್ಕಿ ಮೆರವಣಿಗೆ, ಅಗ್ನಿಪೂಜೆ, ರಥೋತ್ಸವ ಸೇರಿದಂತೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಸಂಸದ ಭಗವಂತ ಖೂಬಾ ತೇರು ಏಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕುಶಾಲರಾವ್ ಯಾಬಾ, ಕೇಂದ್ರ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ಭಾರತೀಯ ಜೀವ ವಿಮಾ ನಿಗಮದ ಕಲಬುರ್ಗಿಯ ಶಿವಶಂಕರ ಗಚ್ಚಿನಮಠ, ಬೀದರ್ ಗ್ರಾಮೀಣ ಪಿಎಸ್‍ಐ ಸವಿತಾ ಪ್ರಿಯಾಂಕ, ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಭಗತ್‌ಸಿಂಗ್ ಯೂತ್‌ ಬ್ರಿಗೇಡ್‌ನ ಜಸ್‍ಪ್ರೀತ್‌ಸಿಂಗ್ ಮೌಂಟಿ, ವಿಜಯಲಕ್ಷ್ಮಿ ಬಹೆನ್, ಶಿಕಲಾ ಇದ್ದರು.

ADVERTISEMENT

ಜಾತ್ರೆ ಅಂಗವಾಗಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ವಿವಿಧೆಡೆಯ ಪೈಲ್ವಾನರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.