ADVERTISEMENT

ಯುವ ದಿನ: ಗಾಯನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 15:54 IST
Last Updated 23 ಜನವರಿ 2022, 15:54 IST
ಬೀದರ್‌ನ ಮಂದಾರ ಕಲಾವಿದರ ವೇದಿಕೆ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಅಂಗಡವಾಗಿ ಆಯೋಜಿಸಿದ್ದ ಗಾಯನ ಮತ್ತು ಕಲೆ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಜಿ.ದೇಶಪಾಂಡೆ ಮಾತನಾಡಿದರು
ಬೀದರ್‌ನ ಮಂದಾರ ಕಲಾವಿದರ ವೇದಿಕೆ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಅಂಗಡವಾಗಿ ಆಯೋಜಿಸಿದ್ದ ಗಾಯನ ಮತ್ತು ಕಲೆ ಪ್ರದರ್ಶನ ಕಾರ್ಯಕ್ರಮದಲ್ಲಿ ಸಾಹಿತಿ ಎಂ.ಜಿ.ದೇಶಪಾಂಡೆ ಮಾತನಾಡಿದರು   

ಬೀದರ್: ಮಂದಾರ ಕಲಾವಿದರ ವೇದಿಕೆ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಗಾಯನ ಕಾರ್ಯಕ್ರಮ ಮತ್ತು ಕಲಾ ಪ್ರದರ್ಶನ ನೌಬಾದ್‌ನ ಹೋಪ್ ವೆಲ್‍ನೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.

ವೇದಿಕೆ ಅಧ್ಯಕ್ಷ. ಎಂ.ಜಿ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರವಿಂದ ಕುಲಕರ್ಣಿ, ಸಂಜೀವಕುಮಾರ ಸ್ವಾಮಿ, ಚನ್ನಬಸಪ್ಪ ನೌಬಾದೆ, ಆಶಾ ಮೇಶಕರ್, ಫಿಟ್‌ನೆಸ್‌ ಕೋಚ್‌ ಮೇಘಾ ತರನಳೆ, ರೇಣುಕಾ ಕಾಲೇಜಿನ ಪ್ರಾಚಾರ್ಯ ಅಶೋಕ ಬುದಿಹಾಳ, ಸಂಗ್ರಾಮ ಮಾನಕಾರೆ ಪಾಲ್ಗೊಂಡಿದ್ದರು.

ಸಂಗ್ರಾಮ ಮಾನಕಾರೆ ಸ್ವಾಗತಿಸಿದರು. ಸುರೇಖಾ ಚೊಂಡಿ ಸ್ವಾಗತ ಗೀತೆ ಹಾಡಿದರು. ಡ್ಯಾನಿಯಲ್ ಮೇತ್ರೆ ನಿರೂಪಿಸಿದರು.

ADVERTISEMENT

ರಬೇಕಾ ಕರಡ್ಯಾಳ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.