ADVERTISEMENT

ರೂ 34.32 ಲಕ್ಷ ಉಳಿತಾಯ ಬಜೆಟ್‌

ಚಾಮರಾಜನಗರ ನಗರಸಭೆ 2014–15ನೇ ಸಾಲಿನ ಬಜೆಟ್‌ ಮಂಡನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2014, 8:21 IST
Last Updated 21 ಫೆಬ್ರುವರಿ 2014, 8:21 IST
ಚಾಮರಾಜನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಎಸ್‌. ನಂಜುಂಡಸ್ವಾಮಿ ಬಜೆಟ್‌ ಮಂಡಿಸಿದರು. ಉಪಾಧ್ಯಕ್ಷೆ ವಹಿದಾ ಬೇಗಂ, ಪೌರಾಯುಕ್ತ ವಿಜಯ ಹಾಜರಿದ್ದರು.
ಚಾಮರಾಜನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಎಸ್‌. ನಂಜುಂಡಸ್ವಾಮಿ ಬಜೆಟ್‌ ಮಂಡಿಸಿದರು. ಉಪಾಧ್ಯಕ್ಷೆ ವಹಿದಾ ಬೇಗಂ, ಪೌರಾಯುಕ್ತ ವಿಜಯ ಹಾಜರಿದ್ದರು.   

ಚಾಮರಾಜನಗರ: ಚಾಮರಾಜನಗರ ನಗರಸಭೆಯಲ್ಲಿ 2014–15ನೇ ಸಾಲಿನಡಿ ₨ 34.32 ಲಕ್ಷ ಉಳಿತಾಯ ಬಜೆಟ್‌ ಮಂಡಿಸಲಾಗಿದೆ.
ನಗರದ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಎಸ್. ನಂಜುಂಡಸ್ವಾಮಿ ಒಟ್ಟು ₨ 6,635.12 ಲಕ್ಷ ಮೊತ್ತದ ಬಜೆಟ್‌ ಮಂಡಿಸಿದರು.

ಬಜೆಟ್‌ನ ಪ್ರಾರಂಭಿಕ ಶಿಲ್ಕು ₨ 1,595.19 ಲಕ್ಷ. ಜಮಾ ₨ 5,039.93 ಲಕ್ಷ. ಒಟ್ಟಾರೆ ಬಜೆಟ್‌ ಮೊತ್ತ ₨ 66.35 ಕೋಟಿಯಾಗಿದೆ.
ಕಳೆದ ವರ್ಷದ ಬಜೆಟ್‌ ಮೊತ್ತ ₨ 49.38. ಕೋಟಿ ಇತ್ತು. ಈ ಬಾರಿ 16.97 ಕೋಟಿ ಹೆಚ್ಚಳವಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಬಜೆಟ್‌ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ಲಭಿಸುವ ಅನುದಾನವನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ. ಸ್ವಂತ ಮೂಲಗಳಿಂದ ಈ ಬಾರಿಯೂ ನಗರಸಭೆಯು ನಿರೀಕ್ಷಿತ ಆದಾಯ ಕ್ರೋಡೀಕರಿಸುವಲ್ಲಿ ಮಾರ್ಗೋಪಾಯ ಕಂಡುಕೊಂಡಿಲ್ಲ.

ಪ್ರತಿ ವರ್ಷದಂತೆ ಈ ಬಾರಿಯೂ ಆಸ್ತಿ ತೆರಿಗೆ, ನೀರಿನ ಶುಲ್ಕ, ಉದ್ದಿಮೆ ಪರವಾನಗಿ, ಕಟ್ಟಡ ಪರವಾನಗಿ ಸೇರಿದಂತೆ ಇತರೇ ಮೂಲಗಳಿಂದ 341.15 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.

ಪ್ರಸ್ತುತ ನಗರಸಭೆಯು ಆರ್ಥಿಕ ಸಂಕಷ್ಟದಲ್ಲಿದೆ. ಸುಮಾರು ₨ 1 ಕೋಟಿಗೂ ಹೆಚ್ಚು ಆಸ್ತಿ ಮತ್ತು ನೀರಿನ ತೆರಿಗೆ ವಸೂಲಿಯಾಗದಿರುವುದೇ ಇದಕ್ಕೆ ಮೂಲ ಕಾರಣ. ಬಾಕಿ ತೆರಿಗೆ ವಸೂಲಿ ಕುರಿತು ಮಾರ್ಗೋಪಾಯ ಕಂಡುಕೊಂಡಿರುವ ಬಗ್ಗೆ ಬಜೆಟ್‌ನಲ್ಲಿ ಅಧ್ಯಕ್ಷರು ಉತ್ತರಿಸಿಲ್ಲ!

ಸರ್ಕಾರದ ಅನುದಾನ:
ಎಸ್‌ಎಫ್‌ಸಿ–  ₨ 400 ಲಕ್ಷ, ಎಸ್‌ಎಫ್‌ಸಿ ಮುಕ್ತನಿಧಿ–    ₨ 446 ಲಕ್ಷ, ವಿದ್ಯುತ್‌ ಅನುದಾನ– ₨ 465 ಲಕ್ಷ, ನಗರೋತ್ಥಾನ(1ನೇ ಹಂತ)– ₨ 820 ಲಕ್ಷ, 13ನೇ ಹಣಕಾಸು– ₨ 258.42 ಲಕ್ಷ, ಯುಐಡಿಎಸ್‌ಎಸ್‌ಎಂಟಿ– ₨ 2,217 ಲಕ್ಷ, ವಾಜಪೇಯಿ ವಸತಿ– ₨ 20 ಲಕ್ಷ, ಎಸ್‌ಜೆಎಸ್‌ಆರ್‌ವೈ– ₨ 20 ಲಕ್ಷ ಸೇರಿದಂತೆ 52 ಲಕ್ಷ ಇತರೇ ಅನುದಾನ ನಿರೀಕ್ಷಿಸಲಾಗಿದೆ.

ಅಭಿವೃದ್ಧಿಗಾಗಿ ಖರ್ಚು:
ರಸ್ತೆ, ಪಾದಚಾರಿ ರಸ್ತೆ, ಚರಂಡಿ ಅಭಿವೃದ್ಧಿ– ₨ 3,410 ಲಕ್ಷ, ಬೀದಿದೀಪ ಅಳವಡಿಕೆ ಮತ್ತು ನಿರ್ವಹಣೆ– ₨ 165 ಲಕ್ಷ, ನೀರು ಪೂರೈಕೆ ವಿದ್ಯುತ್‌ ಶುಲ್ಕ– ₨ 497.42 ಲಕ್ಷ, ಕುಡಿಯುವ ನೀರಿನ ಕಾಮಗಾರಿ– ₨ 432 ಲಕ್ಷ, ವಿವಿಧ ಯೋಜನೆಗಳಿಗೆ ವಂತಿಗೆ– ₨ 432 ಲಕ್ಷ ನಿಗದಿಪಡಿಸಲಾಗಿದೆ.

ಘನತ್ಯಾಜ್ಯ ವಿಲೇವಾರಿ– ₨ 252 ಲಕ್ಷ, ಕಟ್ಟಡ ಅಭಿವೃದ್ಧಿ ಮತ್ತು ನಿರ್ವಹಣೆ– ₨ 134 ಲಕ್ಷ, ಡಿಪಿಆರ್‌ ತಯಾರಿಕೆ–               ₨ 27 ಲಕ್ಷ, ಉದ್ಯಾನ ಅಭಿವೃದ್ಧಿ– ₨ 40 ಲಕ್ಷ, ಸ್ಮಶಾನ ಅಭಿವೃದ್ಧಿ– ₨ 10 ಲಕ್ಷ, ನೈಸರ್ಗಿಕ ವಿಕೋಪಕ್ಕೆ ಪರಿಹಾರ–  ₨ 10 ಲಕ್ಷ, ಶೇ 22.75ರ ಅನುದಾನದಡಿಯ ಕಾರ್ಯಕ್ರಮಗಳಿಗೆ ₨ 130 ಲಕ್ಷ ಮೀಸಲಿಡಲಾಗಿದೆ.

ಶೇ 7.25 ಅನುದಾನ– ₨ 45.90 ಲಕ್ಷ, ಅಂಗವಿಕಲರ ಕಲ್ಯಾಣ– ₨ 10 ಲಕ್ಷ, ನೌಕರರ ವೇತನ– ₨ 325 ಲಕ್ಷ, ಆಧುನಿಕ ಕಸಾಯಿ ಖಾನೆ ನಿರ್ಮಾಣ ₨ 481 ಲಕ್ಷ ಸೇರಿದಂತೆ ಇತರೇ ವೆಚ್ಚಕ್ಕೆ ₨ 242.38 ಲಕ್ಷ ಮೀಸಲಿಡಲಾಗಿದೆ.
ಸಭೆಯಲ್ಲಿ ಉಪಾಧ್ಯಕ್ಷೆ ವಹಿದಾ ಬೇಗಂ, ಪೌರಾಯುಕ್ತ ವಿಜಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.