ADVERTISEMENT

ಸದೃಢ ಆರೋಗ್ಯಕ್ಕೆ ಕ್ರೀಡೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 7:55 IST
Last Updated 15 ಫೆಬ್ರುವರಿ 2012, 7:55 IST

ಕೊಳ್ಳೇಗಾಲ: `ಸ್ನೇಹ ಮತ್ತು ದೇಹದ ಸ್ವಾಸ್ಥ್ಯಕ್ಕೆ ಕ್ರೀಡೆ ಅಗತ್ಯ~ ಎಂದು ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಜಿ. ಮಹಾದೇವ ತಿಳಿಸಿದರು.

ಪಟ್ಟಣದ ಎಂ.ಜಿ.ಎಸ್.ವಿ. ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣ ದಲ್ಲಿ ಮಂಗಳವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯ ಅಂತರ ವಲಯ ಅಂತರ ಕಾಲೇಜು ಪುರುಷರ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿ ದರು. ಕ್ರೀಡಾಪಟುಗಳನ್ನು ಪ್ರೀತಿ ಯಿಂದ ಪರಸ್ಪರ ಸ್ನೇಹಮಯ ವಾತಾವರಣ ದಲ್ಲಿ ಉತ್ತಮ ಗುರಿ ಯನ್ನು ಹೊಂದಿ ಉತ್ತಮ ಪ್ರದರ್ಶನ ನೀಡುವ ಯತ್ನ ಮಾಡಬೇಕು ಎಂದರು.

ಚಾಮರಾಜನಗರ ಮತ್ತು ಕೊಳ್ಳೇಗಾಲ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಚಾಮರಾಜನಗರ ತಂಡ ಕೊಳ್ಳೇಗಾಲ ತಂಡದ ವಿರುದ್ಧ 16 ರನ್‌ಗಳ ಜಯಗಳಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.