
ಪ್ರಜಾವಾಣಿ ವಾರ್ತೆ
ಚಾಮರಾಜನಗರ: ‘ಕೆಲವು ಹೈನುಗಾರರು ಡೇರಿಗಳಿಗೆ ಪೂರೈಸುವ ಹಾಲಿನಲ್ಲಿ ಯೂರಿಯಾ, ಸಕ್ಕರೆ, ಪೌಡರ್ ಸೇರಿಸುತ್ತಿದ್ದ ಕಲಬೆರಕೆ ಅಂಶ ಕಂಡುಬರುತ್ತಿದೆ’ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ರೈತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಚಿವರು ‘ಕೆಎಂಎಫ್ಗೆ ಪೂರೈಕೆ ಆಗುತ್ತಿರುವ ಹಾಲಿನಲ್ಲಿ ಶೇ 16ರಷ್ಟು ಹಾಗೂ ಖಾಸಗಿ ಕಂಪನಿಗಳ ಹಾಲಿನಲ್ಲಿ ಶೇ 32ರಷ್ಟು ಕಲಬೆರಕೆ ಅಂಶ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಹೇಳಿದರು.
‘ಹೈನುಗಾರರ ಹಿತದೃಷ್ಟಿಯಿಂದ ಸರ್ಕಾರ ಹಾಲಿಗೆ ಹೆಚ್ಚುವರಿ ಪ್ರೋತ್ಸಾಹಧನ, ಸಬ್ಸಿಡಿ ನೀಡುತ್ತಿದೆ. ಮಕ್ಕಳು ಕುಡಿಯುವ ಹಾಲನ್ನು ಕಲಬೆರಕೆ ಮಾಡಬಾರದು’ ಎಂದು ಸಚಿವರು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.