ADVERTISEMENT

ಮಾದಪ್ಪನಿಗೆ ಬೆಳ್ಳಿ‌ ಕಣ್ಣು ಕಾಣಿಕೆ ನೀಡಿದ ಎಸ್.ಎಂ.ಕೃಷ್ಣ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 4:56 IST
Last Updated 7 ಮಾರ್ಚ್ 2021, 4:56 IST
ಮಹದೇಶ್ವರ ಬೆಟ್ಟದ ಮಲೆ‌ಮಹದೇಶ್ವರ ಸ್ವಾಮಿ
ಮಹದೇಶ್ವರ ಬೆಟ್ಟದ ಮಲೆ‌ಮಹದೇಶ್ವರ ಸ್ವಾಮಿ   

ಚಾಮರಾಜನಗರ: ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಅವರು ಮಹದೇಶ್ವರ ಬೆಟ್ಟದ ಮಲೆ‌ಮಹದೇಶ್ವರ ಸ್ವಾಮಿಗೆ 1.110 ಕೆಜಿ ತೂಕದ ಬೆಳ್ಳಿಯ ಮೂರು ಕಣ್ಣುಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

ಅವರು ಭಕ್ತರೊಬ್ಬರ ಮೂಲಕ ಶುಕ್ರವಾರ ಕಾಣಿಕೆಯನ್ನು ದೇವಾಲಯಕ್ಕೆ‌ ಅರ್ಪಿಸಿದ್ದಾರೆ.

ಶನಿವಾರ ಮಲೆ‌ಮಹದೇಶ್ವರ ಸ್ವಾಮಿಗೆ ಬೆಳ್ಳಿ ಕಣ್ಣನ್ನು ಧಾರಣೆ ಮಾಡಿ ಪೂಜೆ‌ ಸಲ್ಲಿಸಲಾಯಿತು.

ADVERTISEMENT

ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಶನಿವಾರ ಬೆಂಗಳೂರಿನಲ್ಲಿ ಕೃಷ್ಣ ಅವರನ್ನು ಭೇಟಿ ಮಾಡಿ ಅಭಿನಂದನೆ ಪತ್ರ ನೀಡಿದ್ದಾರೆ.

ಮಲೆ ಮಹದೇಶ್ವರ ಸ್ವಾಮಿಯು ಎಸ್.ಎಂ.ಕೃಷ್ಣ ಅವರ ಮನೆ ದೇವರಾಗಿದ್ದು, ಮುಖ್ಯಮಂತ್ರಿಯಾಗಿದ್ದಾಗ ಬೆಟ್ಟದಲ್ಲಿ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದ್ದರು.

ಇತ್ತೀಚೆಗೆ ನಡೆದ ಮೊಮ್ಮಗನ ಮದುವೆ ಬಳಿಕ ಈಗ ಬೆಳ್ಳಿ ಕಣ್ಣಿನ ಕಾಣಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.