ADVERTISEMENT

ಯೇಸು ಅವಹೇಳನ: ದೂರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 14:01 IST
Last Updated 27 ಡಿಸೆಂಬರ್ 2024, 14:01 IST

ವಿರಾಜಪೇಟೆ : ಕ್ರೈಸ್ತ ಧರ್ಮ ಹಾಗೂ ಯೇಸು ಕ್ರಿಸ್ತ ಬಗ್ಗೆ ಅವಹೇಳನ ಸಂದೇಶ ಹರಿಬಿಟ್ಟಿರುವುದನ್ನು ಖಂಡಿಸಿ ರೋಮನ್ ಕ್ಯಾಥೊಲಿಕ್ ಅಸೋಸಿಯೇಷನ್  ವಿರಾಜಪೇಟೆಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಕ್ರೈಸ್ತ ಧರ್ಮ ಹಾಗೂ ದೇವರ ಬಗ್ಗೆ ಡಿ.25 ರಂದು ಲೋಕನಾಥ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಮನು ಮಾದಪ್ಪ ಎಂಬುವವರು ಕೂಡ ಇದನ್ನು ಸಮರ್ಥಿಸಿಕೊಂಡು ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದನ್ನು ಅಸೋಸಿಯೇಷನ್ ತೀವ್ರವಾಗಿ ಖಂಡಿಸುತ್ತದೆ. ಧರ್ಮಕ್ಕೆ ಧಕ್ಕೆ ತರುವ ರೀತಿಯ ಸಂದೇಶವನ್ನು ಹರಿಬಿಟ್ಟಿರುವವರನ್ನು ಬಂಧಿಸಿ‌ ಕಾನೂನಿನ ಸೂಕ್ತ ಕ್ರಮ ಜರುಗಿಸಬೇಕು. ಉನ್ನತ ಮಟ್ಟದ ತನಿಖೆಯಾಗಬೇಕು. ಇಲ್ಲವಾದಲ್ಲಿ  ಜಿಲ್ಲೆಯಾದ್ಯಂತ ಹೋರಾಟ ನಡೆಸುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಸಂಘಟನೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಜೋಕಿಂ ರೋಡ್ರಿಗಸ್‌ , ಪ್ರಧಾನ ಕಾರ್ಯದರ್ಶಿ ಜೂಡಿ ವಾಸ್, ತಾಲ್ಲೂಕು ಅಧ್ಯಕ್ಷ ಆಂಟನಿ ರಾಬಿನ್, ಉಪಾಧ್ಯಕ್ಷ ಜಾನ್ ವರ್ಗಿಸ್, ಸಮಿತಿ ಸದಸ್ಯ ಡಿಸೋಜ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.