ಗುಂಡ್ಲುಪೇಟೆ: ತಾಲ್ಲೂಕಿನ ಹಸಗೂಲಿ ಗ್ರಾಮದಲ್ಲಿ ಪಾಳುಬಾವಿಗೆ ಬಿದ್ದಿದ್ದ ಚಿರತೆ ಶನಿವಾರ ರಾತ್ರಿ ಏಣಿ ಸಹಾಯದಿಂದ ಮೇಲೆ ಬಂದು ಪಾರಾಗಿದೆ.
ಜೂನ್ 18ರಂದು ಗ್ರಾಮದ ಪಾಳುಬಾವಿಯೊಳಗೆ ಬಿದ್ದಿದ್ದ ಚಿರತೆಯನ್ನು ಮೇಲೆತ್ತಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಹಾಸ ಪಟ್ಟಿದ್ದರು. ಚಿರತೆ ಬಾವಿಯೊಳಗಿನ ಪೊಟರೆಯೊಳಗೆ ಸೇರಿಕೊಂಡಿದ್ದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿತ್ತು. ಆದ್ದರಿಂದ ಅಧಿಕಾರಿಗಳು ಕ್ಯಾಮೆರಾ ಅಳವಡಿಸಿ ಬೋನು ಇಟ್ಟಿದ್ದರು. ಜೊತೆಗೆ ಏಣಿಯನ್ನೂ ಇಡಲಾಗಿತ್ತು.
ಶನಿವಾರ ರಾತ್ರಿ ಏಣಿ ಸಹಾಯದಿಂದ ಮೇಲೆ ಬಂದು ಹೋರ ಹೋಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.