ADVERTISEMENT

ಕುದೇರಿನಲ್ಲಿ ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 14:41 IST
Last Updated 7 ಜೂನ್ 2025, 14:41 IST
ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಇಡಲಾಗಿದ್ದ ಬೋನಿಗೆ ಚಿರತೆ ಬಿದ್ದಿರುವುದು 
ಸಂತೇಮರಹಳ್ಳಿ ಸಮೀಪದ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಇಡಲಾಗಿದ್ದ ಬೋನಿಗೆ ಚಿರತೆ ಬಿದ್ದಿರುವುದು    

ಸಂತೇಮರಹಳ್ಳಿ: ಸಮೀಪದ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಹಿಡಲಾಗಿದ್ದ ಬೋನಿಗೆ ಶನಿವಾರ ಚಿರತೆ ಬಿದ್ದಿದೆ.

ಕುದೇರು, ತೊರವಳ್ಳಿ, ಬಡಗಮೋಳೆ, ತೆಂಕಲಮೋಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 2 ವಾರದ ಹಿಂದೆ ಚಿರತೆ ರೈತರ ಜಮೀನಿನಲ್ಲಿ ತಿರುಗಾಡಿರುವುದರ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಕುದೇರು ಗ್ರಾಮದ ಬವವರಾಜು ಎಂಬುವರ ಜಮೀನಿನಲ್ಲಿ ಸಾಕಿದ ನಾಯಿ ಹಾಗೂ ತೊರವಳ್ಳಿ, ತೆಂಕಲಮೋಳೆ, ಬಡಗಲಮೋಳೆ ಗ್ರಾಮಗಳ ಜನರು ಆಡು, ಕುರಿಗಳನ್ನು ಮೇಯಿಸಲು ಬಿಟ್ಟ ವೇಳೆಯಲ್ಲಿ ಚಿರತೆ ದಾಳಿ ನಡೆಸಿತ್ತು.

ಈ ಹಿನ್ನೆಲೆಯಲ್ಲಿ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಚಾಮರಾಜನಗರ ಅರಣ್ಯ ಇಲಾಖೆ ವತಿಯಿಂದ ಬೋನ್ ಹಾಕಲಾಗಿತ್ತು.

ADVERTISEMENT

ಈ ಹಿನ್ನೆಲೆಯಲ್ಲಿ ಶನಿವಾರ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಚಾಮರಾಜನಗರದ ಡಿಆರ್‌ಎಫ್ ಚಂದ್ರಕುಮಾರ್, ಗೌರಿಶಂಕರ್, ಅರಣ್ಯ ರಕ್ಷಕರಾದ ಪೃಥ್ವಿರಾಜು ಸಿಬ್ಬಂದಿ ಮಹೇಶ್, ರೇವಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.